ಮೈಸೂರು: ನಗರದಲ್ಲಿ ಜ್ವಾಲಾಮುಖಿ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದಿಂದ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ನಟ ಡಾ.ಶಿವರಾಜ್ ಕುಮಾರ್ 2023ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಹ್ಯಾಟ್ರಿಕ್ ಹೀರೋ, ಎಲ್ಲರಿಗೂ ಬಾಸ್ ಒಬ್ಬರೇ ಅದು ದೇವರು. ಏಕೆ ಬಾಸ್-ಬಾಸ್ ಅಂತಾ ಒದ್ದಾಡ್ತೀರಾ? ಎಂದು ಬುದ್ದಿವಾದ ಹೇಳಿದರು.
ಎಲ್ಲರ ಮನೆಯಲ್ಲೂ ಒಬ್ಬೊಬ್ಬ ಬಾಸ್ ಇರುತ್ತಾನೆ. ಎಲ್ಲರ ಹೃದಯದಲ್ಲೂ ಒಬ್ಬ ಬಾಸ್ ಇರ್ತಾನೆ. ಅಲ್ಲಿಗೆ ಅವನೇ ಬಾಸ್ ಆಗಿರ್ತಾನೆ. ಅದು ಬಿಟ್ಟು ನಾನೊಬ್ಬ ಬಾಸ್, ಇನ್ನೊಬ್ಬ ಬಾಸ್ ಅನ್ನೋದಲ್ಲ ಎಂದು ಅಭಿಮಾನಿಗಳಿಗೆ ಶಿವಣ್ಣ ತಿಳುವಳಿಕೆ ಹೇಳಿದರು.
ಕಾರ್ಯಕ್ರಮ ಆಯೋಜಕರಾಗಿದ್ದ ಮೈಸೂರು ರಿಫ್ರೆಶ್ಮೆಂಟ್ ಮಾಲೀಕ ವಿಶ್ವ ಅವರನ್ನು ನಮ್ಮ ಬಾಸ್ ಅಂದ ಯುವಕನಿಗೆ ಸಲಹೆ ನೀಡುತ್ತಾ, ಅಭಿಮಾನಿಗಳಿಗೂ ಬುದ್ದಿ ಹೇಳಿದ್ದಾರೆ.