ಎಂಥ ಗುರುವಯ್ಯ ಇವರು..!?
ಎಂತಾ ಮಾರಾಯಾ, ಪಂಕ್ತಿಯಲ್ಲಿ ಊಟಕ್ಕೆ ಕೂತವರನ್ನ, ಜಾತಿಯವ ಅಲ್ಲ ಅಂತೇಳಿ ಎಬ್ಬಿಸಿಬಿಟ್ರಂತೆ ನೋಡು ಆ ಮನುಷ್ಯ..’ ಸರಿಸುಮಾರು ಐದು ವರ್ಷಗಳ ಹಿಂದೆ ಹೀಗೊಂದು ಮಾತು ಅನಿರೀಕ್ಷಿತವಾಗಿ ನಾನು ಕೇಳಬೇಕಾಗಿ ಬಂದಿತ್ತು. ಊರಿನ ಕಾರವಾರ್ ರಸ್ತೆಯಲ್ಲಿರುವ ಕ್ಷೌರಿಕನಂಗಡಿಯಲ್ಲಿ ಕ್ಷೌರ ಮುಗಿಸಿ ನೂರು ರೂಪಾಯಿಗಳನ್ನು ನಾಪಿತನಿಗೆ ಕೊಟ್ಟು, ಚಿಲ್ಲರೆಗಾಗಿ ನಿಂತಿದ್ದಾಗ, ಗಡಿಬಿಡಿಯಲ್ಲಿ...