ಉಂಡು ಕೊಬ್ಬಿದ್ದಾಗ ಮಾತ್ರ ಅಧಿಕಾರದ ಚಿಂತೆ, ಅಮಲಿನ ಚಿಂತೆ, ಕಾಮದ ಚಿಂತೆ..
ಪ್ರೀತಿಯ ಕನ್ನಡದ ಮಾಣಿಕ್ಯರುಗಳೇ, ಯುದ್ಧ ಎಂದರೇನು? ೭೦೦,೦೦,೦೦,೦೦೦ ಬೆಲೆಬಾಳುವ ವಿಮಾನದಲ್ಲಿ ಗಂಟೆಗೆ ೨೮,೦೦,೦೦೦ ಹಾರಾಟಕ್ಕೆ ಖರ್ಚು ಮಾಡುತ್ತಾ ೭೦,೦೦,೦೦೦ ಬೆಲೆಬಾಳುವ ಬಾಂಬನ್ನು ತೆಗೆದುಕೊಂಡು ಹೋಗಿ, ದಿನಕ್ಕೆ ೭೦೦ ಕೂಡಾ ದುಡಿಯಲಾಗದ ಸಾಮಾನ್ಯ ಮನುಷ್ಯನನ್ನು ಕೊಂದುಹಾಕುವ ಕಾರ್ಯಕ್ರಮ. ಹಾಗಂತ ಯಾರೋ ಬರೆದು ಹಾಕಿದ್ದನ್ನು ಓದಿ ಮನಸ್ಸಿಗೆ ತುಂಬ ಹಿಂಸೆಯಾಯಿತು. ಎಷ್ಟು...