ಗದಗ: ಸಾಮಾನ್ಯವಾಗಿ ಪ್ರಾಣಿಗಳು ಹಾಗೂ ಮನುಷ್ಯರ ನಡುವೆ ಉತ್ತಮ ಬಾಂದವ್ಯವಿರುತ್ತದೆ. ಮನುಷ್ಯರ ಅದೆಷ್ಟೋ ನೋವುಗಳು ಪ್ರಾಣಿಗಳಿಗೂ ಅರ್ಥವಾಗುತ್ತದೆ. ಸದ್ಯ ಮಾಲೀಕ ಸತ್ತ ಎರಡೇ ಗಂಟೆಗಳಲ್ಲಿ ಆತ ಸಾಕಿದ್ದ ಎತ್ತು ಕೂಡ ಪ್ರಾಣ ಬಿಡುವ ಮೂಲಕ ಗ್ರಾಮಸ್ಥರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದ್ದಾರೆ.
ಸಾಕಷ್ಟು ವರ್ಷಗಳಿಂದ ಎತ್ತಿನೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದ ಭೀಮಪ್ಪ ಕಣಗಿನಹಾಳ ನಿಧನಹೊಂದಿದ್ದಾರೆ. ರೈತ ಮೃತಪಟ್ಟ ಕೆಲವೇ ಗಂಟೆಗಳಲ್ಲಿ ಕೃಷಿ ಕಾರ್ಯದಲ್ಲಿ ರೈತನ ಜೊತೆಗಿದ್ದ ಪ್ರೀತಿಯ ಎತ್ತು ಕೂಡ ಕೊನೆಯುಸಿರೆಳೆದಿದೆ.
ಮಾಲೀಕನ ಸಾವಿನ ಬೆನ್ನಲ್ಲೇ ಎತ್ತು ಸಾವನ್ನಪ್ಪಿರುವ ಘಟನೆ ಕಂಡು ಗ್ರಾಮಸ್ಥರು ಮಮ್ಮಲ ಮರುಗಿದರು. ಭೀಮಪ್ಪನ ಜಮೀನಿನಲ್ಲಿ ಅಕ್ಕ-ಪಕ್ಕ ಸಮಾಧಿ ಮಾಡಿ ಲಿಂಗಾಯತ ವಿಧಿವಿಧಾನದಂತೆ ರೈತ ಭೀಮಪ್ಪ ಮತ್ತು ಅವರ ಎತ್ತಿನ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮನಕಲಕುವ ಅಂತ್ಯಸಂಸ್ಕಾರಲ್ಲಿ ಬೆನಕನಕೊಪ್ಪ ಸೇರಿದಂತೆ ಹಲವಾರು ಗ್ರಾಮಸ್ಥರು ಭಾಗಿಯಾಗಿದ್ದರು.