ಅಹಂಕಾರವನ್ನು ರಾಕ್ಷಸೀ ಪ್ರವೃತ್ತಿ ಎನ್ನುತ್ತಾನೆ ಗೀತಾಚಾರ್ಯ ಶ್ರೀಕೃಷ್ಣ.
ದಂಭೋದರ್ಪೋýಭಿಮಾನಶ್ಚಕ್ರೋಧಃ ಪಾರುಷ್ಯಮೇವ ಚ|
ಅಜ್ಞಾನಮಚಾಭಿಚಾತಸ್ಯ ಪಾರ್ಥ ಸಂಪದಮಾಸುರೀಮ್||
ದಾoಭಿಕತನ, ಸೊಕ್ಕು, ಹೆಮ್ಮೆ, ಸಿಡುಕು, ಮತ್ತೊಬ್ಬರ ಮನಸ್ಸನ್ನು ನೋಯಿಸುವ ಬಿರುನುಡಿಗಳು, ಅಜ್ಞಾನ ಇವುಗಳು… ಎಲೈ ಪಾರ್ಥನೇ! ಅಸುರ ಸಂಪತ್ತಿಗೆ ತಕ್ಕವನಾಗಿ ಹುಟ್ಟಿದವನಲ್ಲಿ ಇರುವುದು. ಅರಿಷಡ್ವರ್ಗಗಳಲ್ಲಿ ಕಾಮ, ಕ್ರೋಧ, ಮೋಹ, ಲೋಭ, ಮಾತ್ಸರ್ಯಗಳೊಂದಿಗೆ ಮದ ಕೂಡ ಇದೆ. ಅರಿಷಡ್ವರ್ಗಗಳ ಪ್ರಭಾವ ನಮ್ಮ ಮೇಲೆ ಬಹಳವೇ ಹೆಚ್ಚಾಗಿದ್ದರೆ, ನಮ್ಮ ಮನಸ್ಸಿನ ಕಣ್ಣು ಮುಚ್ಚಿಕೊಂಡು ಬಿಡುತ್ತದೆ. ಆಗ ನಾವು ದುಷ್ಟ ಕೆಲಸಗಳನ್ನು ಮಾಡಲು ಉಪಕ್ರಮಿಸುತ್ತೇವೆ.
ಅಹಂಕಾರಿ ಜನರ ಬಗ್ಗೆ ನಾವು ನಮ್ಮ ಪುರಾಣಗಳಲ್ಲಿ ಕೇಳಿದ್ದೇವೆ. ಇತಿಹಾಸದಲ್ಲಿಯೂ ಇವರುಗಳು ಹೇರಳವಾಗಿದ್ದಾರೆ. ಪ್ರಚಲಿತ ಸಮಯದಲ್ಲಿಯೂ ಇಂತಹವರು ಇದ್ದಾರೆ. ದ್ವಾಪರಯುಗದಲ್ಲಿ ಯಮುನಾ ನದಿಯಲ್ಲಿ ತನ್ನ ಸಂಸಾರ ಸಮೇತ
ಸೇರಿಕೊಂಡು ನೀರನ್ನು ವಿಷಪೂರಿತ ಮಾಡಿದ ಕಾಳಿಂಗನಿoದ ಗೋಕುಲವಾಸಿಗಳು ಬಹಳವೇ ತೊಂದರೆಗೆ ಒಳಗಾದರು. ಕಾಳಿಂಗ (ಕಾಲಿಯಾ ಎಂದು ಕೂಡ ಹೇಳುತ್ತಾರೆ) ಎಂಬ ಆ ಆರುತಲೆಯ ವಿಷಸರ್ಪದ ವಿಷದ ಪ್ರಭಾವದಿಂದ ಯಮುನೆಯ ನೀರು ಕುಡಿದ ಅನೇಕ ಹಸುಗಳು ಅನಾರೋಗ್ಯಕ್ಕೆ ತುತ್ತಾದವು. ಕೆಲವು ಮರಣವನ್ನು ಹೊಂದಿದವು.
ಅವರು ಶ್ರೀಕೃಷ್ಣನ ಮೊರೆಹೊಕ್ಕಾಗ ಅವನು ನದಿಯೊಳಗೆ ಮುಳುಗಿ ಈಜುತ್ತಾ ಹೋಗಿ ಕಾಳಿಂಗನೊoದಿಗೆ ಸೆಣಸಾಡಿ, ಅವನ ತಲೆಯ ಮೇಲೆ ಕಾಲಿಟ್ಟು ಕುಣಿದ. ಅವನ ಪಾದತಾಡನದಿಂದ ಆ ಆರು ತಲೆಗಳಲ್ಲಿಯೂ ಜ್ಞಾನೋದಯವಾಗಿತ್ತು. ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ತಲೆಗಳು ಅವು ಎನ್ನುತ್ತಾರೆ ದಾರ್ಶನಿಕರು. ದೇವದೇವನ ಪಾದವು ತಲೆಯ ಮೇಲೆ
ಪಟಪಟ ಪೆಟ್ಟುಕೊಟ್ಟಾಗ ನಮ್ಮ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳು ನಿಯಂತ್ರಣಕ್ಕೆ ಬರುತ್ತವೆ. ಶ್ರೀಕೃಷ್ಣ ತನ್ನ ಎಡಗೈಯಲ್ಲಿ ಹಿಡಿದು ಅದುಮಿದ ಕಾಳಿಂಗನ ಬಾಲವನ್ನು ಅಹಂ ಎನ್ನುತ್ತಾರೆ. ಪುರಾಣದಲ್ಲಿ ಕಾಳಿಂಗ ಒಬ್ಬನೇ ಅಲ್ಲ ಅಹಂಭಾವಿ. ಪ್ರಹ್ಲಾದನ ಮೊಮ್ಮಗ ಬಲಿ ಚಕ್ರವರ್ತಿ ತನ್ನ ದಾನಗುಣದಿಂದ ಅದೆಷ್ಟು ಜನಪ್ರಿಯನಾಗಿದ್ದನೆಂದರೆ ಅವನಲ್ಲಿ ಮದವು ಹುಟ್ಟಿ, ಇಂದ್ರಪದವಿಗಾಗಿ ಆಶಿಸಿದ. ಆ ಸಮಯದಲ್ಲಿ ಭಗವಂತ ವಾಮನನ ಅವತಾರ ತಾಳಿ, ಬಲಿಯ ಬಳಿ ಮೂರು ಹೆಜ್ಜೆ ಬೇಡಿದಾಗ ದುರಹಂಕಾರವಿದ್ದ ಬಲಿ ಈ ಪುಟ್ಟ ಹುಡುಗ
ಎಷ್ಟು ಮಹಾ ಕೇಳಬಲ್ಲ ಎಂದು ಒಪ್ಪಿಕೊಂಡ. ಅವನು ಅದನ್ನು ಕೊಡಕೂಡದೆಂದು ಅವನ ಗುರು ಶುಕ್ರಾಚಾರ್ಯ ದಾನಕ್ಕೆ ನೀರು ಹಾಕುವ ಕಮಂಡಲುವಿನಲ್ಲಿ ದುಂಬಿಯಾಗಿ ಸೇರಿಕೊಂಡ. ದೇವದೇವನು ಅವನ ಅಹಂಕಾರವನ್ನು ಅಳಿಸಲು ಒಂದು ದರ್ಬೆಯಿಂದ ಅವನ ಒಂದು ಕಣ್ಣು ಚುಚ್ಚಿ ಅದನ್ನು ಕುರುಡು ಮಾಡಿದ.
ಅಹಂಕಾರಗಳಲ್ಲಿನ ವಿಧಗಳನ್ನು ಭಗವಂತ ಹೀಗೆ ವಿವರಿಸುತ್ತಾನೆ. ಮುಕ್ತಸಂಗೋýನಹoವಾದೀ ಧೃತ್ಯುತ್ಸಾಹಸಮನ್ವಿತಃ|
ಸಿದ್ಧ್ಯಸಿದ್ಧೊö್ಯÃರ್ನಿರ್ವಿಕಾರB ಕರ್ತಾ ಸಾತ್ತ್ವಿಕಃಉಚ್ಯತೇ|| ಆಸಕ್ತಿ ಇಲ್ಲದವನು, ನಾನು ಮಾಡುವೆನೆಂಬ ಅಹಂಕಾರವಿಲ್ಲದವನು, ಧೃತ್ಯುತ್ಸಾಹಗಳಿAದ ಕೂಡಿದವನು, ಫಲವು ಸಿದ್ಧಿಸಿದರೂ ಯಾವ ಮನೋವಿಕಾರವೂ ಇಲ್ಲದೇ ಕರ್ತನು ಸಾತ್ತ್ವಿಕನೆನಿಸುವನು.
ಒಮ್ಮೆ ನಮಗೆ ಒಂದು ವಿಷಯದಲ್ಲಿ ಆಸಕ್ತಿ ಇಲ್ಲದಿದ್ದರೆ ನಾವು ಅದನ್ನು ಚೆನ್ನಾಗಿ ಮಾಡಬಲ್ಲೆವೆಂಬ ಅಹಂಕಾರ ನಮಗೆ ಉಂಟಾಗುವುದಿಲ್ಲ. ಏನಾದರೂ ಕೆಲಸ ಮಾಡಲೇಬೇಕಾದ ಅವಕಾಶ ಬಂದರೂ, ಇದನ್ನು ನಾನು ಮಾಡಬಲ್ಲೆ, ನಾನೇ ಮಾಡಿದೆ ಎನ್ನುವ ಅಹಂಕಾರ ನಮಗೆ ಉಂಟಾಗುವುದಿಲ್ಲ. ಧೈರ್ಯ ಮತ್ತು ಉತ್ಸಾಹದಿಂದ ಎಲ್ಲವನ್ನೂ ನಾನೇ ಮಾಡಬಲ್ಲೆ ಎನ್ನುವ ಅಹಂಕಾರ ಇರದಿರುವವರು ನಾವಾದರೆ ನಾವು ಅಹಂಕಾರಿಗಳಾಗೆವು. ಒಂದು ವೇಳೆ ನಾವೇ ಒಂದು ಕೆಲಸವನ್ನು ಮಾಡಿ ಅದರಲ್ಲಿ ಒಳ್ಳೆಯ ಫಲಿತಾಂಶವನ್ನು ಪಡೆದರೂ ಅದು ನನ್ನಿಂದ ಎಂಬ ಅಹo ನಮಗೆ ಉಂಟಾಗದಿದ್ದರೆ ನಮ್ಮಲ್ಲಿ ಸತ್ತ್ವಗುಣ ಇದೆ ಎನ್ನುತ್ತಾನೆ ಗೀತಾಚಾರ್ಯ. ಅಹಂಕಾರಿ ಮನುಷ್ಯ ಯಾವಾಗಲೂ ವ್ಯಕ್ತಿಗಳನ್ನು ಮತ್ತು ವಸ್ತುಗಳನ್ನು ತನಗಿಂತ ಕೆಳಗೆ ಎಂದುಕೊಳ್ಳುತ್ತಾನೆ. ಎಲ್ಲಿಯವರೆಗೂ ನಾವು ಕೆಳಗೇ ನೋಡುತ್ತಿರುತ್ತೇವೋ ಅಲ್ಲಿಯವರೆಗೆ ನಮ್ಮ ಮೇಲೇನಿದೆ ಎಂಬುದು ನಮಗೆ ಗೊತ್ತೇ ಆಗುವುದಿಲ್ಲ. ಅಹಂಕಾರದ ಮೂರು ಘಟ್ಟಗಳನ್ನು ಮೂರು ಲೋಕಗಳಿಗೆ ಹೋಲಿಸುತ್ತಾರೆ ಕೆಲವರು. ಅಹಂಕಾರದ ಆರಂಭ ಸ್ವರ್ಗದಂತೆ. ಅಹoಕಾರದ ಮುಂದುವರಿಕೆ ಭೂಮಿಯಂತೆ. ಅಹಂಕಾರದ ಕೊನೆಯ ಜಾಗ ನರಕದಂತೆ.
ಅಹoಕಾರo ಬಲಂ ದರ್ಪಂ ಕಾಮಂ ಕ್ರೋಧಮ್ ಪರಿಗ್ರಹಮ್|
ವಿಮುಚ್ಯ ನಿರ್ಮಮಃ ಶಾಂತೋ ಬ್ರಹ್ಮಭೂಯಾಯಕಲ್ಪತೇ||
ಅಹಂಕಾರ, ಬಲ, ದರ್ಪ ಕಾಮ, ಕ್ರೋಧ, ವಿಷಯಗಳನ್ನು ಕೂಡಿಹಾಕುವುದು, ಇವುಗಳನ್ನು ಬಿಟ್ಟು ತನ್ನದೆಂಬುದಿಲ್ಲದೇ
ಶಾoತವಾಗಿರುವಾತನು ಬ್ರಹ್ಮಸ್ವರೂಪನಾಗುವುದಕ್ಕೆ ತಕ್ಕವನಾದವನು. ಭಗವಂತನು ಇಲ್ಲಿ ಯಾವ ಯಾವ ಗುಣಗಳು ನಮ್ಮಲ್ಲಿ ಇರಕೂಡದೆಂದು ಹೇಳುತ್ತಾನೆ. ಈ ಪಟ್ಟಿಯಲ್ಲಿ ಅಹಂಕಾರ ಮತ್ತು ದರ್ಪಗಳು ಕೂಡ ಇರುವುದನ್ನು ನಾವು ಗಮನಿಸಬಹುದು. ಎಂದಿದ್ದರೂ ಅಹಂಕಾರ ಮತ್ತು ದರ್ಪ ನಮ್ಮ ಅವನತಿಗೆ ಕಾರಣವಾಗುತ್ತದೆ. ಅತಿ ದೊಡ್ಡ ಉದಾಹರಣೆಗಳು ರಾವಣ ಮತ್ತು ಹಿರಣ್ಯಕಶಿಪು. ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ತನಗೆ ಸಾವು ಬರಕೂಡದೆಂದು ವರ
ಕೇಳಿದವರು ರಾವಣ ಮತ್ತು ಹಿರಣ್ಯಕಶಿಪು. ಅವರ ಅತಿಯಾದ ಆತ್ಮವಿಶ್ವಾಸ ಮತ್ತು ಅವರ ಅಹಂಕಾರವೇ ಅವರ ವಿನಾಶಕ್ಕೆ ಕಾರಣವಾಯಿತು. ರಾವಣನ ವರ ನೋಡಿ. ಸಾವು ಇಲ್ಲದಿರಲು ಸಾಧ್ಯವಿಲ್ಲವೆಂದಾಗ ಅವನು ತಾನು ಯಾರು ಯಾರಿಂದ ಸಾಯಕೂಡದು ಎಂದು ಪಟ್ಟಿ ನೋಡುತ್ತಾನೆ. ದೇವ, ಯಕ್ಷ, ಕುಬೇರ ಇತ್ಯಾದಿಗಳಿಂದ ಸಾವು ಬೇಡ ಎಂದವನು ಮಾನವರು ಮತ್ತು ವಾನರರು ನನಗೇನು ಮಾಡಿಯಾರು? ಅವರ ಬಗ್ಗೆ ನನಗೆ ನಿರ್ಲಕ್ಷ್ಯವಿದೆ ಎಂದ ರಾವಣ. ಆಗಲೇ ದೇವದೇವನು
ರಾಮನೆಂಬ ಮನುಷ್ಯ ಅವತಾರ ತಾಳಿ, ವಾನರರ ಸಹಾಯದಿಂದ ರಾವಣನ ಸಂಹಾರ ಮಾಡಿದ. ದುರಹಂಕಾರಿ ಹಿರಣ್ಯಕಶಿಪು ಇನ್ನೂ ಹೆಚ್ಚಿನ ಸಂಕೀರ್ಣ ವರ ಬೇಡಿದ್ದ. ಬೆಳಗ್ಗೆ, ರಾತ್ರಿ, ಮನೆ ಒಳಗೆ, ಹೊರಗೆ, ಯೋನಿಯಲ್ಲಿ ಹುಟ್ಟಿದ್ದು, ಮನುಷ್ಯ, ಪ್ರಾಣಿ, ಆಯುಧ ಹೀಗೆ ಏನೇನೋ ಷರತ್ತುಗಳನ್ನು ಹಾಕಿದ. ಅದಕ್ಕೇ ಅರ್ಧ ಮನುಷ್ಯ, ಅರ್ಧ ಸಿಂಹ, ಕಂಬ ಒಡೆದು ಹೊರಬಂದು, ಸಂಜೆಯ ವೇಳೆ, ಹೊಸ್ತಿಲಿನ ಮೇಲೆ, ಉಗುರುಗಳಿಂದ ಕೊಂದ. ಶಿಲ್ಪಿಯೊಬ್ಬ ಬಹಳ ಖ್ಯಾತಿ ಪಡೆದಿದ್ದ. ಅವನ ಶಿಲ್ಪಗಳು ನೈಜವಾಗಿ ಕಾಣುತ್ತಿದ್ದವು. ಒಂದು ದಿನ ಅವನಿಗೊಂದು ಕನಸು ಬಿತ್ತು. ಇನ್ನು ಹದಿನೈದು
ದಿನಗಳಲ್ಲಿ ಯಮದೂತನು ಬಂದು ಅವನನ್ನು ಕರೆದೊಯ್ಯುವನೆಂದು. ಶಿಲ್ಪಿ ತನ್ನದೇ ಒಂಬತ್ತು ಶಿಲ್ಪಗಳನ್ನು ಕೆತ್ತಿದ. ಹದಿನೈದನೆಯ ದಿನ ಬೆಳಗ್ಗೆ ಯಮದೂತ ಬರುವ ಸಮಯದಲ್ಲಿ ಅವನ ಒಂಬತ್ತು ಶಿಲ್ಪಗಳ ನಡುವೆ ತಾನೂ ಒಂದಾಗಿ ನಿಂತುಕೊoಡ. ಅವನಿಗೆ ತಾನು ಬಹಳ ಜಾಣನೆಂಬ ಅಹಂಕಾರವಿತ್ತು. ಯಮದೂತ ಎಷ್ಟು ಪರೀಕ್ಷಿಸಿದರೂ ಆ ಹತ್ತರಲ್ಲಿ ಶಿಲ್ಪಿ ಯಾರೆಂದು ಅವನಿಗೆ ತಿಳಿಯಲೇ ಇಲ್ಲ. ಸ್ವಲ್ಪ ಹೊತ್ತು ಹುಡುಕಾಡಿ ಯಮನ ಬಳಿ ಅವನು ಮರಳಿದ. ತಾನು ಪಟ್ಟ ಫಜೀತಿಯ ಬಗ್ಗೆ ಹೇಳಿದ. ಯಮನಿಗೆ ನಿಜಕ್ಕೂ ಇದು ಅತಿ ಎನಿಸಿತು. ಅದಕ್ಕೇ ಅವನು ತಾನೇ ಆ ಶಿಲ್ಪಿಯ ಪ್ರಾಣವನ್ನು ಒಯ್ಯಲು ಭೂಮಿಗೆ ಇಳಿದು ಬಂದ. ಶಿಲ್ಪಿಗೆ ಯಮ ಬಂದಿದ್ದು ತಿಳಿದು ಬಹಳವೇ ಜಾಗರೂಕತೆಯಿಂದ ನಿಂತಿದ್ದ. ಸಾವಿನ ದೇವತೆ ಯಮನಿಗೆ ಕೂಡ ಕೆಲವು ಕಾಲ ಗಲಿಬಿಲಿಯಾಗಿತ್ತು. ಅವನು ಒಂದುಕ್ಷಣ ಯೋಚಿಸಿದ. ನಂತರ, “ಶಿಲ್ಪಿಯೇ, ಈ ಶಿಲೆಗಳೆಲ್ಲವೂ ಪರಿಪೂರ್ಣವಾಗಿವೆ. ಆದರೆ ಒಂದು ಚಿಕ್ಕ ತಪ್ಪಿದೆ” ಎಂದ. ಶಿಲ್ಪಿಗೆ ಅವನ ಕೆಲಸದ ನೈಪುಣ್ಯದಲ್ಲಿ ಒಂದು ತಪ್ಪಿರುವುದೂ ಇಷ್ಟವಿರಲಿಲ್ಲ. ಅವನೆಂದರೆ ಯಾರು? ಮಹಾಶಿಲ್ಪಿ ಎಂಬ ಅಹಂಕಾರ ಅವನಿಗಿತ್ತು. ಆಗ ಅವನು ಶಿಲ್ಪಗಳ ನಡುವಿನಿಂದ ಹೊರಗೆ ಬಂದು, “ಎಲ್ಲಿದೆ ತಪ್ಪು?” ಎಂದ.
ಯಮನು ತನ್ನ ಪಾಶವನ್ನು ಅವನ ಕುತ್ತಿಗೆಗೆ ಬಿಗಿದು, “ಇಲ್ಲಿ” ಎಂದ. ಶಿಲ್ಪಗಳು ನಿಜಕ್ಕೂ ಪರಿಪೂರ್ಣವಾಗಿದ್ದವು. ಆದರೆ ಶಿಲ್ಪಿಯು ಅವನ ಅಹಂಕಾರದಿoದಾಗಿ ಸಿಕ್ಕಿಕೊಂಡಿದ್ದ.ಭಗವದ್ಗೀತೆಯ ಕೊನೆಯ ಅಧ್ಯಾಯವಾದ ಹದಿನೆಂಟನೇ
ಅಧ್ಯಾಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ,
ಮಚ್ಚಿತ್ತಃ ಸರ್ವದುರ್ಗಾಣಿ ಮತ್ಪ್ರಸಾದಾದಾತ್ತರಿಷ್ಯಸಿ|
ಅಥಚೇತ್ವಮಹಂಕಾರಾತ್ ನ ಶ್ರೋಷ್ಯಸಿ ವಿನಂಕ್ಷ್ಯಸಿ||
ನನ್ನಲ್ಲಿಯೇ ಚಿತ್ತವನ್ನಿಟ್ಟರೆ ಸಕಲ ಕಷ್ಟಗಳನ್ನೂ ನನ್ನ ಅನುಗ್ರಹದಿಂದ ದಾಟುವೆ. ಹಾಗಲ್ಲದೇ ಅಹಂಕಾರದಿAದ ನನ್ನ ಮಾತು ಕೇಳದೇ ಹೋದರೆ ಹಾಳಾಗುವೆ ಎನ್ನುತ್ತಾನೆ.
ಇಂಗ್ಲಿಷ್ನಲ್ಲಿ ಒಂದು ಮಾತಿದೆ. ಕೆಳಗೆ ಧಬ್ಬೆಂದು ಬೀಳುವ ಮೊದಲು
ನಾವು ಮಹಾ ಅಹಂಕಾರಿಗಳಾಗಿರುತ್ತೇವoತೆ. ಮಾಮೂಲಿ ಬೀಳುವುದಕ್ಕಿಂತ ಅತಿಯಾದ ಅಹಂಕಾರದಲ್ಲಿದ್ದಾಗ ಬಿದ್ದರೆ ಆ ಪತನ ಅತಿ ದಾರುಣವಾಗಿರುತ್ತದೆ. ನೀರೊಳಗಿರ್ದುಂ ಬೆಮರ್ತನ್ ಉರಗಪತಾಕಂ ನೆನಪಿದೆಯಲ್ಲವೇ? ತಾನೇ ಸಾಮ್ರಾಟನೆಂದು ಮೆರೆದ ದುರ್ಯೋಧನ ತೊಂಬತ್ತೊoಬತ್ತು ಜನ ತಮ್ಮಂದಿರನ್ನು ಕಳೆದುಕೊಂಡು, ಕೊಳದೊಳಗೆ ಅವಿತುಕೊಳ್ಳುವಂತಹ ದುರವಸ್ಥೆಗೆ ಸಿಕ್ಕಿಕೊಳ್ಳುತ್ತಾನಲ್ಲ! ಅದು ಅತ್ಯಂತ ಎತ್ತರದ ಸ್ತರದ ಅಹಂಕಾರ. ಅದಕ್ಕೇ ನಾವು ನಮ್ಮ ಸಾಧನೆಗಳ ಬಗ್ಗೆ ಹೆಮ್ಮೆ ಪಡಬಹುದಂತೆ. ಆದರೆ ಮುಂದಿನ ಪರೀಕ್ಷೆಗೆ ಸಿದ್ಧವಾಗಬೇಕಂತೆ. ಏಕೆಂದರೆ ನಮ್ಮ ಆವಶ್ಯಕತೆ ಅಲ್ಲಿರುತ್ತದೆ. ನಮ್ಮ ಹೆಮ್ಮೆಯು ನಮ್ಮನ್ನು ಪರವಶಗೊಳಿಸಿದಾಗ, ನಮ್ಮ ಸಾಮರ್ಥ್ಯವನ್ನು ಅದು ಕದ್ದುಬಿಡುತ್ತದೆ; ಆಗ ನಾವು ಪ್ರಪಂಚವನ್ನು ಸ್ಪಷ್ಟವಾಗಿ ನೋಡಲಾರೆವು. ಅಹಂಕಾರಕ್ಕೆ ಗುಲಾಮರಾಗದೇ ಜೀವನವನ್ನು ಅರಿತು, ಮುಂದಿನ ಕಾರ್ಯಗಳತ್ತ ನಮ್ಮ ಮನಸ್ಸನ್ನು ತಿರುಗಿಸಿ, ನಮ್ಮ ದೌರ್ಬಲ್ಯಗಳನ್ನು ಗೆಲ್ಲಬೇಕು.