ಕರ್ನಾಟಕ ದೇಶದಲ್ಲಿ ಪುರೋಗಾಮಿಯಾದ ರಾಜ್ಯ ಎಂಬ ಹೆಗ್ಗಳಿಕೆ ಇತ್ತು. ಎಲ್ಲ ಬಗೆಯ ಋತುಮಾನಕ್ಕೆ ಪ್ರಶಸ್ತವಾದ ನಿಸರ್ಗ ಸಂಪತ್ತು ಇಲ್ಲಿನದು. ವರ್ಷದಲ್ಲಿ ನಾಲ್ಕು ತಿಂಗಳು ಬೇಸಗೆ, ನಾಲ್ಕು ತಿಂಗಳು ಮಳೆಗಾಲ, ಉಳಿದ ನಾಲ್ಕು ತಿಂಗಳು ಚಳಿಗಾಲ. ಆದರ್ಶ ಎನಿಸುವಂಥ ಹವಾಮಾನ ಪರಿಸ್ಥಿತಿ. ನಿತ್ಯ ಹರಿದ್ವರ್ಣ ಕಾಡುಗಳೂ, ಕುರುಚಲು ಕಾಡುಗಳೂ, ವಿಶ್ವದ ಪರಂಪರೆಯ ಪಟ್ಟಿಗೆ ಸೇರಬಹುದಾದ ಶೋಲಾ ಅರಣ್ಯಗಳು. ಸ್ವಚ್ಛವಾದ ಕರಾವಳಿಯ ಭಾಗ. ಅಲ್ಲಲ್ಲಿ ಫಲವತ್ತಾದ
ಎರೆಮಣ್ಣಿನ ಭೂಮಿ. ಕೃಷಿಗೂ, ಕೈಗಾರಿಕೆಗೂ, ಸ್ವಂತ ವಾಣಿಜ್ಯ ವ್ಯವಹಾರಗಳನ್ನು ನಡೆಸಿ ಅಭಿವೃದ್ಧಿ ಹೊಂದುವoಥ ಪರಿಸ್ಥಿತಿ ಕರ್ನಾಟಕದ ವಿಶೇಷವಾಗಿತ್ತು.
ಕರ್ನಾಟಕದಲ್ಲಿ ಬೆಳೆಯುವ ರೇಷ್ಮೆಗೆ ಜಾಗತಿಕ ಮನ್ನಣೆ. ಇಲ್ಲಿನ ಭೂಮಿಯಲ್ಲಿ ಬೆಳೆಯುವ ಶ್ರೀಗಂಧ ನಾಡಿನ ಹೆಮ್ಮೆ. ನೈಸರ್ಗಿಕವಾಗಿ ಸಮೃದ್ಧವಾಗಿದ್ದ ನಾಡನ್ನು ಸುಂದರ ವಸತಿ ಪ್ರದೇಶವಾಗಿ ಇಲ್ಲಿ ಆಳಿದ ಎಲ್ಲ ರಾಜಮನೆತನಗಳೂ ಕಾಲಕಾಲಕ್ಕೆ ಅಭಿವೃದ್ಧಿಪಡಿಸಿದ ಹೆಗ್ಗಳಿಕೆ. ಜನಸಮುದಾಯವನ್ನು ಸಮಾನತೆಯ ಆಶಯಕ್ಕೆ ಪ್ರಭಾವಿಸಿದ `ಅನುಭವ ಮಂಟಪ’ ಹನ್ನೆರಡನೆಯ ಶತಮಾನದಲ್ಲಿಯೇ ಇಲ್ಲಿ ಸಾಕಾರಗೊಂಡ ಸಾಮಾಜಿಕ ಬದಲಾವಣೆಯ ಪ್ರಬುದ್ಧ ವೇದಿಕೆ. ಆಗಿನ ಸಾಂಸ್ಕೃತಿಕ ದಾಖಲೆಯಾದ ವಚನಗಳು, ಕನ್ನಡದಲ್ಲಿ ಮಾತ್ರವಲ್ಲ, ದೇಶದಲ್ಲಿ ಮಾತ್ರವಲ್ಲದೆ, ಜಗತ್ತಿನಲ್ಲಿಯೇ ವಿಶಿಷ್ಟವಾದ ಸಾಂಸ್ಕೃತಿಕ ದಾಖಲೆಗಳು. ಅನುಭವವನ್ನು ಅನುಭಾವಕ್ಕೆ ಏರಿಸಿದ ಸಾರ್ವಕಾಲಿಕ ಚಿಂತನೆಗಳನ್ನು ಸೂತ್ರರೂಪದಲ್ಲಿ ಸಂಗ್ರಹಿಸಿದ ಕಿಡಿನುಡಿಗಳು. ಉಪನಿಷತ್ತಿನ ವಾಕ್ಕುಗಳಿಗೆ ಸಮಾನವಾದ ಅನುಭವ ಸೂಕ್ತಿಗಳು.
ಇಂಥ ಶ್ರೀಮಂತ, ಸಮೃದ್ಧ ಸಾಂಸ್ಕೃತಿಕ, ಸಾಹಿತ್ಯಿಕ ಹಿನ್ನೆಲೆಯ ಕರ್ನಾಟಕಕ್ಕೆ ೧೯೪೭ರಲ್ಲಿ ಪರದೇಶೀಯರಿಂದ ಸ್ವಾತಂತ್ರö್ಯ ಬಂದ ನಂತರ ನಮ್ಮನ್ನು ನಾವೇ ಆಳಿಕೊಳ್ಳುವ ರಾಜಕೀಯ ವ್ಯವಸ್ಥೆಯನ್ನು ಸದೃಢಗೊಳಿಸಲು ಅವಕಾಶ ಪಡೆದ ಪ್ರಜಾಸತ್ತಾತ್ಮಕ ಆಡಳಿತದ ಅನಿವಾರ್ಯ ಅಂಗಗಳಾದ ರಾಜಕೀಯ ಪಕ್ಷಗಳು ಇಷ್ಟು ವರ್ಷಗಳು ನಡೆಸಿದ್ದೆಲ್ಲ ಅಧಿಕಾರ ರಾಜಕಾರಣ. ಅಧಿಕಾರ ಹಿಡಿಯುವುದಕ್ಕೆ ಜನರ ಆದೇಶ ಪಡೆಯುವುದಕ್ಕೆ ಏನು ಮಾಡಬೇಕೋ ಅಷ್ಟನ್ನು ಮಾಡುವುದು, ಅಧಿಕಾರಕ್ಕೆ ಬಂದ ಮೇಲೆ ಅದನ್ನು ಉಳಿಸಿಕೊಳ್ಳುವುದಕ್ಕೆ ಮಾತ್ರ ಕಸರತ್ತು
ನಡೆಸುವುದು. ದೇಶಕ್ಕೆ ಸ್ವಾತಂತ್ರö್ಯ ಬಂದಾಗ ಜನತೆಯಲ್ಲಿದ್ದ ಸಾಕ್ಷರತೆಯ ಪ್ರಮಾಣ ಶೇ ೪ರಷ್ಟು ಇದ್ದುದು ಎಪ್ಪತ್ತು ವರ್ಷಗಳಲ್ಲಿ ಶೇ ಎಪ್ಪತ್ತಕ್ಕೆ ಏರಿದೆ ಎಂಬುದು ಪ್ರಗತಿಯ ಸಂಕೇತ ಎಂದು ಅಧಿಕಾರಸ್ಥ ರಾಜಕಾರಣಿಗಳು
ಹೇಳಿಕೊಳ್ಳುವುದಿದೆ. ಆದರೆ ಸಾಕ್ಷರತೆಯಿಂದ ಜನತೆಯಲ್ಲಿ ರಾಜಕೀಯ ಪ್ರಜ್ಞೆ ಮೂಡಿದೆ ಎಂಬುದಕ್ಕೆ ಆಧಾರಗಳು ಸಿಗುತ್ತಿಲ್ಲ. ಏಕೆಂದರೆ ಯಾರನ್ನೋ ತೋರಿಸಿ ಇನ್ಯಾರಿಗೋ ಮತ ಯಾಚಿಸಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವ ರಾಜಕೀಯ ಪಕ್ಷಗಳ ತಂತ್ರಗಾರಿಕೆ ಜನತೆಗೆ ಅರ್ಥವಾಗಿಲ್ಲ.
ಈಚೆಗೆ ಖಾಸಗಿ ವಾಹಿನಿಯೊಂದು ಕಾಲೇಜಿನಲ್ಲಿ ಓದುತ್ತಿರುವ ಯುವಕ ಯುವತಿಯರನ್ನು ಅನಿರೀಕ್ಷಿತವಾಗಿ ಸಂದರ್ಶಿಸಿ ಜನವರಿ ೨೬ರ ಮಹತ್ವ ಏನು ಎಂಬುದನ್ನು ತಿಳಿಯಬಯಸಿತು. `ಏನು ಮಹತ್ವ’ ಎಂಬುದುಪ್ರಶ್ನೆ ಕೇಳಿದವರಿಗೆ ಎದುರಾದ ಮರುಪ್ರಶ್ನೆ. `ಅವತ್ತು ರಾಷ್ಟçಧ್ವಜಾರೋಹಣ ಮಾಡಲಾಗುತ್ತದೆ. ದೆಹಲಿಯಲ್ಲಿ ದೊಡ್ಡ ಮಟ್ಟದ ಪೆರೇಡ್ ನಡೆಯುತ್ತದೆ’ ಎಂದು ಚಿಕ್ಕ ವಿವರಣೆ ನೀಡಿದ ಮೇಲೆ `ಏನು ಅಂತ ಗೊತ್ತಿಲ್ಲ’ ಅಂತ ಒಬ್ಬ, `ಯಾಕೋ ಗೊತ್ತಿಲ್ಲ’ ಅಂತ ಇನ್ನೊಬ್ಬ, `ಅದನ್ನು ನನ್ನ ಹತ್ತಿರ ಯಾಕೆ ಕೇಳುತ್ತೀರಿ?’ ಎಂದು ಗದರಿದವಳು ಒಬ್ಬ ಹುಡುಗಿ. `ಸಂವಿಧಾನ ಎಂದರೆ ಗೊತ್ತಾ?’ ಎಂದು ಕೇಳಿದರೆ `ಗೊತ್ತಿಲ್ಲ’ ಎಂಬುದೇ ಹೆಚ್ಚಿನ ಯುವಕ ಯುವತಿಯರ ಉತ್ತರ ಬಂದಿತ್ತು. ಅಂದರೆ ಕಾಲೇಜು ಮಟ್ಟದ ಶಿಕ್ಷಣ ಪಡೆಯುತ್ತಿರುವ ಯುವಜನರಲ್ಲಿ ನಮ್ಮ ಸಂವಿಧಾನದ ಅರಿವೇ ಇಲ್ಲ ಎಂಬುದು ಸ್ಪಷ್ಟ. ಅಷ್ಟೇ ಏಕೆ? ರಾಜ್ಯದಲ್ಲಿ ಯಾರು ಮುಖ್ಯಮಂತ್ರಿ, ರಾಷ್ಟ್ರಪತಿ ಯಾರು ಎಂಬ ಪ್ರಶ್ನೆಗಳಿಗೂ ಉತ್ತರ ನೀಡಲಾಗದಷ್ಟು ಸಾಮಾನ್ಯಜ್ಞಾನದ ಕೊರತೆ ನಮ್ಮ ಯುವಜನತೆಯಲ್ಲಿ ಇರುವುದನ್ನು ಇಂಥ ಅನಿರೀಕ್ಷಿತ ಸಂದರ್ಶನಗಳಲ್ಲಿ ಟಿವಿ ಚಾನಲ್ಗಳು ಹೊರಹಾಕಿವೆ. ಆಗಾಗ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವ ಚುನಾವಣೆ ಸುದ್ದಿಗಳು, ಫಲಿತಾಂಶಗಳು ಯಾವುದಕ್ಕೆ ಸಂಬAಧಿಸಿವೆ ಎಂಬುದರ ಬಗ್ಗೆಯೂ ವಿದ್ಯಾವಂತ ಯುವಜನತೆಯಲ್ಲಿ ಸ್ಪಷ್ಟತೆ ಇಲ್ಲದಿರುವುದೂ ಗೊತ್ತಾಗುತ್ತದೆ.
ಬೆಂಗಳೂರು ನಗರದಲ್ಲಿರುವವರಿಗೆ ಮಹಾನಗರಪಾಲಿಕೆಯ ಚುನಾವಣೆ, ವಿಧಾನಸಭೆ ಚುನಾವಣೆ, ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ವಿಧಾನಪರಿಷತ್ ಚುನಾವಣೆ, ಲೋಕಸಭೆ ಚುನಾವಣೆ, ರಾಜ್ಯಸಭೆಗೆ ನಡೆಯುವ ಚುನಾವಣೆಗಳ ಬಗ್ಗೆಯೂ ಅರಿವಿನ ಕೊರತೆ ಇರುತ್ತದೆ. ವಿದ್ಯಾವಂತರಲ್ಲಿಯೇ ಇರುವ ಇಂಥ ಪರಿಸ್ಥಿತಿಯನ್ನು ಲಕ್ಷಿಸಿ ಕೆಲವು ಸಾಮಾಜಿಕ ಕರ್ಯಕರ್ತರು, `ಸಂವಿಧಾನದ ಓದು’ ಎಂಬುದನ್ನು ಒoದು ಅಭಿಯಾನದ ಮೂಲಕ ಪ್ರಾರಂಭಿಸಬೇಕಾದ ಪರಿಸ್ಥಿತಿ ಬಂದಿರುವುದಕ್ಕೆ ಜನತೆಯನ್ನು ತಮ್ಮ ಹಕ್ಕು ಬಾಧ್ಯತೆಗಳ ಬಗ್ಗೆ ಅಮಾಯಕತೆಯಿಂದ ಉಳಿಸಿದ ರಾಜಕೀಯ ವ್ಯವಸ್ಥೆಯೇ ಹೊಣೆಯಾಗಿದೆ. ಜನತೆಯನ್ನು ಭಾವನಾತ್ಮಕ ಅಂಶಗಳಿAದ ಪ್ರಚೋದಿಸುವುದರಿಂದ
ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಬಹುದು ಎಂಬುದು ಈಚಿನ ಮೂರು ದಶಕಗಳಿಂದ ಅನುಭವಕ್ಕೆ ಬರುತ್ತಿದೆ. ಜನತೆಯಲ್ಲಿ ರಾಜಕೀಯ ಜಾಗೃತಿ ಮೂಡಿಸಿ, ಕೆಳಹಂತದಿAದಲೇ ಜನತೆಯ ನಾಯಕತ್ವ ಮೂಡಿ ಬರಬೇಕು ಎಂದು ಉದ್ದೇಶಿಸಿ ಜಾರಿಗೆ ತಂದ ಅಧಿಕಾರ ವಿಕೇಂದ್ರೀಕರಣದ ಪ್ರಯೋಗಗಳು ಕರ್ನಾಟಕದಲ್ಲಿ ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ಆರಂಭವಾಗಿದ್ದರೂ ಅದು ಸಮುದಾಯದ ಜಾಗೃತಿಯಾಗಿ ಉಳಿಯುವಂಥ ಪರಿಸ್ಥಿತಿಯನ್ನು ಅಧಿಕಾರ ರಾಜಕಾರಣ ಕಲ್ಪಿಸಿಲ್ಲ. ರಾಜ್ಯದಲ್ಲಿ ಮೂರು ಹಂತದ ಅಧಿಕಾರ ವಿಕೇಂದ್ರೀಕರಣ ಪ್ರಕ್ರಿಯೆಯಾಗಿ ಗ್ರಾಮಪಂಚಾಯತ್, ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ಗಳಿಗೆ ಪ್ರತಿನಿಧಿಗಳ ಆಯ್ಕೆಯ ಪ್ರಕ್ರಿಯೆಯಲ್ಲಿ ಜನತೆಯ ನಾಯಕತ್ವವನ್ನು ಬೆಳೆಸುವ ಉದ್ದೇಶವಿದ್ದರೂ ಅದು ಪಕ್ಷ ರಾಜಕಾರಣದಲ್ಲಿ ಮಸುಕಾಗಿ ಹೋಗಿರುವುದು ಅಧಿಕಾರ ವಿಕೇಂದ್ರೀಕರಣ ಪ್ರಕ್ರಿಯೆಯನ್ನೇ ದುರ್ಬಲಗೊಳಿಸಿದ ವಿದ್ಯಮಾನ. ನಿಮ್ಮ ಅವಶ್ಯಕತೆಗಳನ್ನು ನೀವೇ ಗುರುತಿಸಿ, ಅವುಗಳನ್ನು ನಿಮ್ಮ ಪ್ರತಿನಿಧಿಯಿಂದ ಸರ್ಕಾರದ ನೆರವು ಪಡೆದು ಪೂರೈಸಿಕೊಳ್ಳಿ ಎಂಬ ಉದಾತ್ತ ಆಶಯದ ಪಂಚಾಯತ್ರಾಜ್ ಮತ್ತು ಗ್ರಾಮಾಭಿವೃದ್ಧಿ ಪರಿಕಲ್ಪನೆ ಪಕ್ಷ ರಾಜಕಾರಣದಲ್ಲಿ ಸಿಲುಕಿ ಅಭಿವೃದ್ಧಿಗೆ ನಿಗದಿಯಾಗುವ ಹಣದಲ್ಲಿ ಶೇ ೪೦ರ ವರೆಗೂ ಪಾಲು ಪಡೆಯುವ ಲೂಟಿ ಪ್ರವೃತ್ತಿಗೆ ಗುರಿಯಾಗಿದೆ.
ಜನತೆಯ ಮತ ಪಡೆದು ಅಧಿಕಾರಕ್ಕೆ ಬರುವುದಕ್ಕೆ ಹಣ ಹೂಡಬೇಕು, ಗೆದ್ದು ಅಧಿಕಾರಕ್ಕೆ ಬಂದ ಮೇಲೆ ಅದನ್ನು ಬಡ್ಡಿ, ಚಕ್ರಬಡ್ಡಿ ಸಮೇತ ಮರಳಿ ಪಡೆಯುವುದಲ್ಲದೆ, ಮುಂದಿನ ಚುನಾವಣೆಯಲ್ಲಿಯೂ ಗೆಲುವು ಸಾಧಿಸುವಷ್ಟು ಗಳಿಸಬೇಕು ಎಂಬುದೇ ಈಗಿನ ರಾಜಕೀಯ ನಡವಳಿಕೆ. ಭಾವನಾತ್ಮಕ ಸಂಗತಿಗಳು ಜನತೆಯ ಮತ ಪಡೆಯುವುದಕ್ಕೆ ನೆರವಾಗುತ್ತವೆ ಎಂಬುದನ್ನು ನೆಚ್ಚಿಕೊಂಡ ಪಕ್ಷಕ್ಕೆ ಅದರಲ್ಲಿ ಕೊಂಚ ಏರುಪೇರಾದರೂ ತಡೆದುಕೊಳ್ಳುವುದು ಕಷ್ಟ. ಅದಕ್ಕೆ ರಾಜ್ಯದಲ್ಲಿ ಒಂದೆರಡು ತಿಂಗಳಿನಿoದ ನಡೆಯುತ್ತಿರುವ ವಿದ್ಯಮಾನಗಳು
ನಿದರ್ಶನವಾಗಿವೆ.
ಭಾರತ ಸರ್ಕಾರ ಪ್ರತಿ ಗಣರಾಜ್ಯೋತ್ಸವ ಆಚರಣೆಯಲ್ಲಿ ದೆಹಲಿಯಲ್ಲಿ ನಡೆಸುವ ಸ್ತಬ್ದಚಿತ್ರಗಳ ಮೆರವಣಿಗೆಯಲ್ಲಿ ಹತ್ತೊಂಬತ್ತು ಇಪ್ಪತ್ತನೆಯ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಸಮಾಜ ಸುಧಾರಣೆಗೆ ಶ್ರಮಿಸಿದ್ದ
ನಾರಾಯಣಗುರುಗಳ ಸ್ತಬ್ದಚಿತ್ರಕ್ಕೆ ಅವಕಾಶ ನಿರಾಕರಿಸಿದೆ ಎಂಬ ಸುದ್ದಿ ಕರಾವಳಿ ಭಾಗದಲ್ಲಿ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಗುರುಗಳ ಅನುಯಾಯಿಗಳಲ್ಲಿ ಪ್ರತಿಭಟನೆ ತೀವ್ರವಾಗುತ್ತಾ ಕರಾವಳಿ ಜಿಲ್ಲೆಗಳಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳನ್ನು ವ್ಯಾಪಿಸುತ್ತಿರುವ ಸುದ್ದಿ ಭಾವನಾತ್ಮಕ ವಿಷಯಗಳನ್ನು ಪ್ರಧಾನವಾಗಿ ಪರಿಗಣಿಸಿದ ರಾಜಕೀಯ ಚಿಂತನೆಗೆ ಆಘಾತಕಾರಿಯಾಯಿತು. ಇದನ್ನು ದುರ್ಬಲಗೊಳಿಸಲು ಇನ್ನೊಂದು ಭಾವನಾತ್ಮಕ ಸಂಗತಿ ಮುನ್ನೆಲೆಗೆ ಬಂದಿತು. ಶಾಲಾಮಕ್ಕಳ ವಸ್ತç ಸಂಹಿತೆಗೆ ಎದುರಾದ ಪರ ವಿರೋಧ ಸಂಗತಿಗಳು ಮುನ್ನೆಲೆಗೆ ಬಂದಾಗ ನಾರಾಯಣ ಗುರುಗಳಿಗೆ ಆಗಿದ್ದ ಕಡೆಗಣನೆಗೆ ಆಕ್ರೋಶಗೊಂಡಿದ್ದ ಜನ ಸಮುದಾಯ ವಸ್ತç ಸಂಹಿತೆಯ ಪರ ವಿರೋಧ ಹೋರಾಟದಲ್ಲಿ
ಆಸಕ್ತವಾಯಿತು. ಇದು ನ್ಯಾಯಾಲಯದಲ್ಲಿ ಚರ್ಚೆಗೆ ಒಳಪಡುತ್ತಿದ್ದಾಗಲೇ ಮಲೆನಾಡಿನಲ್ಲೊಂದು ಹತ್ಯೆಯಾಯಿತು. ಅದಕ್ಕೆ ಸಂಬoಧಿಸಿದ ಪ್ರತಿಭಟನೆ ತೀವ್ರಗೊಂಡು ಜನತೆಯಲ್ಲಿ ಮತ್ತೆ ಭಾವನಾತ್ಮಕ ಸಂಗತಿಗಳು ಮುನ್ನೆಲೆಗೆ ಬಂದವು. ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗ ಈ ಕಾವನ್ನು ಅಲ್ಲಿಯವರೆಗೆ ಉಳಿಸಿಕೊಳ್ಳುವುದು ರಾಜಕೀಯ ಪಕ್ಷಗಳಿಗೆ ಸವಾಲು. ಪಕ್ಷಗಳಿಗೆ ಜನ ಎಂದರೆ ಮತ ನೀಡುವ ಸಂಖ್ಯೆ. ಜನರ ಸಮಸ್ಯೆಗಳನ್ನು ನಿವಾರಿಸುವುದಾಗಲೀ, ಅವರನ್ನು ಸದೃಢರನ್ನಾಗಿಸುವುದಾಗಲೀ ರಾಜಕೀಯ ಪಕ್ಷಗಳಿಗೆ ಆದ್ಯತೆಯ ಅಂಶವಲ್ಲ. ದೇಶಕ್ಕೆ ಸ್ವಾತಂತ್ರö್ಯ ಬಂದು ಎಪ್ಪತ್ತೆöÊದು ವರ್ಷಗಳಾದರೂ ಎಲ್ಲರೂ ಸಮಾನ ಅವಕಾಶ ಪಡೆಯುವುದು ಸಂವಿಧಾನ ನೀಡಿದ ಹಕ್ಕು ಎಂಬುದು ಜನತೆಗೆ ಇನ್ನೂ ಮನವರಿಕೆ ಆಗಿಲ್ಲ. ರಾಜಕೀಯ ಪಕ್ಷಗಳಿಗೆ ಮತಗಳಷ್ಟೇ ಮುಖ್ಯ; ಜನರ ಕಲ್ಯಾಣವಲ್ಲ.