ಬದುಕಿನಲ್ಲಿ ಒಮ್ಮೆಯಾದರೂ ನೋಡಲೇಬೇಕು ಎನಿಸುವ ಪವಿತ್ರ ಪೂಜ್ಯ ಸ್ಥಳಗಳಲ್ಲಿ ಕೈಲಾಸ ಮಾನಸ ಸರೋವರ ಪ್ರಮುಖವಾದದ್ದು. ನಮ್ಮ ಮನಸ್ಸು ಇದ್ದರೆ ಮಾನಸ ಸರೋವರದಂತಿರಬೇಕು ಎಂಬ ಪ್ರಚಲಿತದಲ್ಲಿರುವ ಮಾತು ಆ ಸರೋವರದ ಶುದ್ದತೆ ಪಾವಿತ್ರö್ಯತೆಗೆ ಸಾಕ್ಷಿ. ಅದು ಕೇವಲ ನಂಬಿಕೆ ಅಷ್ಟೇ ಅಲ್ಲ. ಸತ್ಯವೂ ಹೌದು.
ಮಾನಸ ಸರೋವರವು ಮೊದಲು ಟಿಬೆಟ್ ದೇಶಕ್ಕೆ ಸೇರಿತ್ತು. ಆನಂತರ ಚೀನಾ ದೇಶವು ಟಿಬೆಟನ್ನು ವಶಪಡಿಸಿಕೊಂಡಿತು. ಈಗ ಟಿಬೆಟ್ನ ಸ್ವಯಂ ಶಾಸನ ಮಾಡಿಕೊಂಡ ವಲಯದಲ್ಲಿದೆ. ಇದನ್ನು ಟಿಬೆಟ್ ಭಾಷೆಯಲ್ಲಿ
“ಮಾಪಂ ಯಮಸ್ತೋಮಮ್” ಎಂದು ಕರೆಯುತ್ತಾರೆ. ಮಾನಸ ಸರೋವರ ಟಿಬೆಟ್ನ ಲ್ಹಾಸಾದಿಂದ ೯೦೦ ಕಿಲೋಮೀಟರ್ ದೂರದಲ್ಲಿದೆ. ಇದರ ಪಶ್ಚಿಮಕ್ಕೆ ರಾಕ್ಷಸತಾಲ್ ಎಂಬ ಇನ್ನೊಂದು ಸ್ವಲ್ಪ ಉಪ್ಪು ನೀರಿನ ಸರೋವರವಿದೆ. ಇದು ಬಹಳ ಎತ್ತರವಾದ ಪ್ರದೇಶದಲ್ಲಿದೆ. ಈ ಸರೋವರದ ಶುದ್ಧವಾದ ನೀರು, ಕೈಲಾಸಪರ್ವತವನ್ನು ಹೊಳೆಯುವಂತೆ ಮಾಡಿದೆ. ಇದು ಕೈಲಾಸಪರ್ವತದ ಹತ್ತಿರವಿದೆ. ಈ ಸರೋವರವು ನಾಲ್ಕು ಪಂಗಡಗಳಾದ ಬೋನ್, ಬೌದ್ಧ, ಜೈನ ಮತ್ತು ಹಿಂದೂಗಳಿಗೆ ಪವಿತ್ರ ಪೂಜ್ಯಸ್ಥಳವಾಗಿದೆ.
ಮಾನಸ ಸರೋವರವು ೧೫,೦೬೦ ಅಡಿಗಳಷ್ಟು (೪೫೯೦ ಮೀಟರ್) ಸಮುದ್ರಮಟ್ಟದಿಂದ ಎತ್ತರದಲ್ಲಿದೆ. ಅತ್ಯಂತ ಶ್ರಮಪಟ್ಟು ಸರೋವರ ತಲುಪಿದ ಕೂಡಲೇ ಯಾತ್ರಿಕರು ಆಯಾಸವನ್ನೇ ಮರೆತು ಅಲ್ಲಿನ ಸೌಂದರ್ಯಕ್ಕೆ ಮೈಮರೆಯುತ್ತಾರೆ. ಅದು ಭೂಮಂಡಲದಲ್ಲಿ ಪ್ರಕೃತಿಯೇ ರಚಿಸಿದ ಅತ್ಯಂತ ಅದ್ಭುತ ವರ್ಣಚಿತ್ರ. ಮಾನಸ ಸರೋವರ ವೃತ್ತಾಕಾರವಾಗಿ ೮೮ ಕಿಲೋಮೀಟರ್ಗಳಷ್ಟು (೫೪.೭ ಮೈಲಿ) ಸುತ್ತಳತೆ ಹೊಂದಿದೆ. ಇದರ ಆಳ ಸುಮಾರು ೯೦ ಮೀಟರ್ (೩೦೦ ಅಡಿಗಳು) ಇದರ ವಿಸ್ತೀರ್ಣ ೩೨೦ ಚದರ ಕಿ. ಮೀ (೧೨೩ ಚ. ಮೈಲಿ). ಇಷ್ಟೇ ವಿವರ ಸಾಕು. ಹದಿನೈದು ಸಾವಿರ ಅಡಿ ಎತ್ತರದಲ್ಲಿ ಕಡಿದಾದ ಬೆಟ್ಟಗುಡ್ಡಗಳ ನಡುವೆ ಹಿಮಾಲಯದ ಹಣೆಯಲ್ಲಿ ರೂಪುಗೊಂಡ ಈ ಸರೋವರದ ಸೋಜಿಗವನ್ನು ವಿವರಿಸಲು. ಇದಕ್ಕೆ ಹೊಂದಿಕೊAಡAತೆ ಹತ್ತಿರವೇ ರಕ್ಷ ಸ್ಥಳವೆಂಬ ಸರೋವರವಿದೆ.
ನೋಡಿ. ಈ ಸರೋವರ ಎಷ್ಟು ನದಿಗಳ ತಾಯಿ ಮಡಿಲು. ಇದು ನೈಸರ್ಗಿಕ ಗಂಗೆಯ ಜನ್ಮಸ್ಥಳ ಗಂಗಾಚ್ಚು ಎಂಬ ಕಾಲುವೆಯ ಹತ್ತಿರವಿದೆ. ಸರೋವರದ ಹತ್ತಿರ ಸಟ್ಲೆಜ್ ನದಿಯ ಉಗಮ ಸ್ಥಾನವಿದೆ. ಇದರ ಪೂರ್ವ ಸಿಂಧೂ ನದಿ ಸೇರುವ ಸ್ಥಳ. ಇದರ ಹತ್ತಿರ ಬ್ರಹ್ಮಪುತ್ರ ನದಿಯ ಉಗಮ ಸ್ಥಳವಿದೆ. ಅಲ್ಲದೆ ಇಂಡಸ್ ಮತ್ತು ಘಘರ ನದಿಯ ಜನ್ಮಸ್ಥಳಗಳಿವೆ. ಇದರಲ್ಲಿ ಬಹಳ ಮುಖ್ಯವಾಗಿ ಸೇರುವ ಸ್ಥಳ… ಗಂಗಾ ನದಿಯದು. ಮಾನಸ ಸರೋವರದ ಒಡಲು ತುಂಬಿದ ಹರಿದ ನೀರು ರಾಕ್ಷಸತಾಲ್ ಸರೋವರವನ್ನು ಸೇರುತ್ತದೆ. ಅದು ಸ್ವಲ್ಪ ಉಪ್ಪು ನೀರಿನಿಂದ ಕೂಡಿದೆ. ಅತಿ ಶುದ್ಧವಾದ ನೀರು ಸ್ವಲ್ಪವೇ ದೂರ ಸಾಗಿ ಉಪ್ಪು ನೀರಿನ ಕೊಳವಾಗುವ ಪ್ರಕೃತಿ ವೈಚಿತ್ರö್ಯವೇ ಅದ್ಭುತ. ವಿಜ್ಞಾನಿಗಳ ಪ್ರಕಾರ ಇಡಿಯ ಹಿಮಾಲಯವೇ ಸಾಗರದಿಂದ, ಖಂಡಾAತರ ಬಂಡೆಯ ಒತ್ತಡದಿಂದ ಮೇಲೆದ್ದು ರೂಪುಗೊಂಡ ಕಥೆ ಇನ್ನೂ ರೋಚಕ.
ಕೈಲಾಸಪರ್ವತದಂತೆ ಮಾನಸ ಸರೋವರವೂ ಸಹ ಪವಿತ್ರ ಯಾತ್ರಾಸ್ಥಳ. ಇದು ಧಾರ್ಮಿಕ ನಂಬಿಕೆಯುಳ್ಳ ಭಕ್ತರನ್ನು ಭಾರತ, ನೇಪಾಳ, ಟಿಬೆಟ್ ಮತ್ತು ಇತರ ನೆರೆಯ ದೇಶಗಳಿಂದ ಆಕರ್ಷಿಸುತ್ತದೆ. ಹಿಂದೂಗಳ ಪ್ರಕಾರ – ಈ ಸರೋವರವನ್ನು ಮೊದಲ ಬಾರಿ ಬ್ರಹ್ಮ, ತನ್ನ ಮನಸ್ಸಿನಿಂದ ಭೂಮಿಯ ಮೇಲೆ ಸೃಷ್ಟಿಸಿದ. ಮಾನಸ ಸರೋವರವು ವ್ಯಕ್ತಿ ಮತ್ತು ಅವನ ಮನಸ್ಸನ್ನು ಶುದ್ಧಿಗೊಳಿಸುತ್ತದೆ. ಯಾರು ಈ ಪವಿತ್ರ ತೀರ್ಥಸ್ವರೂಪಿ ಗಂಗೆಯನ್ನು ಕುಡಿಯುತ್ತಾರೋ ಅವರು ನೇರವಾಗಿ ಶಿವನ ಕೈಲಾಸವನ್ನು ಮರಣದ ನಂತರ ಸೇರುತ್ತಾರೆಂಬ ನಂಬಿಕೆ ಇದೆ. ಆತ ಜನ್ಮಾಂತರದ ಪಾಪಕರ್ಮಗಳಿAದ ವಿಮೋಚನೆ ಪಡೆಯುತ್ತಾನೆಂಬ ನಂಬಿಕೆಯಿದೆ. ಆದ್ದರಿAದ ಪ್ರತಿವರ್ಷ ‘ಕೈಲಾಸ ಮಾನಸ ಸರೋವರ ಯಾತ್ರೆ’ ಎಂಬ ಪವಿತ್ರ ಯಾತ್ರೆಯ ಮುಖಾಂತರ ಭಕ್ತರು ಇಲ್ಲಿಗೆ ಬರುತ್ತಾರೆ. ಇಲ್ಲಿ ಹಿಂದೂಗಳು ಸಾಂಪ್ರದಾಯಿಕವಾಗಿ ತೀರ್ಥಸ್ನಾನ ಕೈಗೊಳ್ಳುತ್ತಾರೆ. ಈ ಸ್ಥಳವು ೧೯೫೧ರಿಂದ ೧೯೮೦ರವರೆವಿಗೂ ಯುದ್ಧಭೀತಿಯಿಂದ ಮುಚ್ಚಲ್ಪಟ್ಟಿತ್ತು.
ಹಿಂದೂ ಧಾರ್ಮಿಕ ವೇದಜ್ಞಾನದ ಪ್ರಕಾರ, ಐದು ಪವಿತ್ರ ಸರೋವರಗಳು(ಪಾಂಚ್ ಸರೋವರ)ಗಳೆಂದರೆ… ಮಾನಸ ಸರೋವರ, ಬಿಂದು ಸರೋವರ, ನಾರಾಯಣ ಸರೋವರ, ಪಂಪ ಸರೋವರ ಮತ್ತು ಪುಷ್ಕರ ಸರೋವರ… ಇದನ್ನು ಶ್ರೀಮದ್ ಭಾಗವತ ಪುರಾಣದಲ್ಲಿ ವಿವರಿಸಿದೆ. ಈ ಸರೋವರ ಚಳಿಗಾಲದಲ್ಲಿ ಹೆಪ್ಪುಗಟ್ಟುತ್ತದೆ. ಈಗಲೂ ಬ್ರಾಹ್ಮಿ ಮುಹೂರ್ತದಲ್ಲಿ ದೇವತೆಗಳು, ಈ ಸರೋವರಕ್ಕೆ ಸ್ನಾನ ಮಾಡಲು ಬರುತ್ತಾರೆಂದು ಹೇಳುತ್ತಾರೆ. ಇದರ ಸುತ್ತ ಅನೇಕ ಬೌದ್ಧ ವಿಹಾರಗಳಿದ್ದು, ಇದು ಬೌದ್ಧರಿಗೂ ಪವಿತ್ರ ಕ್ಷೇತ್ರವಾಗಿದೆ. ಕೈಲಾಸ ಪರ್ವತ ಮೌಂಟ್ ಎವರೆಸ್ಟ್ ಶಿಖರ ೨೯,೦೨೯ ಅಡಿ ಇದ್ದರೆ, ಕೈಲಾಸಪರ್ವತ ೨೭,೭೭೮ ಅಡಿಗಳ ಎತ್ತರವಿದೆ. ಮಾನಸ ಸರೋವರದ ಉತ್ತರಕ್ಕೆ ಕೈಲಾಸ ಪರ್ವತವಿದೆ. ಕೈಲಾಸ ಪರ್ವತವು ಟಿಬೆಟ್ನ ಹಿಮಾಲಯ ಶ್ರೇಣಿಯ ಗಾಂಗ್ ಡೈಸ್ ಸರಣಿಯ ಒಂದು ಶಿಖರವಾಗಿದೆ. ಕೈಲಾಸಪರ್ವತವುಸಮುದ್ರ ಮಟ್ಟದಿಂದ ೯೦೦೦ ಮೀಟರ್ ಎತ್ತರದಲ್ಲಿದೆ. ಕೈಲಾಸ ಮತ್ತು ಮಾನಸ ಸರೋವರವು ಒಂದೇ ವಲಯದಲ್ಲಿದೆ. ಸರೋವರದಿಂದ ೩೦
ಕಿಲೋಮೀಟರ್ ದೂರದಲ್ಲಿ ಈ ಪರ್ವತವಿದೆ, ಸರೋವರದಲ್ಲಿ ಸ್ನಾನ, ಪೂಜೆ, ಹೋಮ, ಕೈಂಕಾರ್ಯ, ತರ್ಪಣದ ನಂತರ ಕೈಲಾಸ ಪರ್ವತದ ಪರಿಕ್ರಮಣ ಆರಂಭವಾಗುತ್ತದೆ. ಕೈಲಾಸ ಪರ್ವತವು ಪಾರ್ವತಿ- ಪರಮೇಶ್ವರರ ವಾಸಸ್ಥಾನ, ಶಿವಶಕ್ತಿಯ ಸಂಗಮ. ಅಂದರೆ ಜೀವಾತ್ಮಕ- ಪರಮಾತ್ಮಕ ಐಕ್ಯ ಸ್ಥಾನ.
ಕೈಲಾಸಪರ್ವತ ಪವಿತ್ರ ಯಾತ್ರೆಯು ಎರಡು ಮಾರ್ಗಗಳಿಂದ ಹೋಗಲು ಸಾಧ್ಯವಾಗುತ್ತದೆ. ಮೊದಲನೆಯದು, ಭಾರತ ಸರಕಾರದಿಂದ ಆಯೋಜಿಸಲ್ಪಟ್ಟ ಮಾರ್ಗ. ದೆಹಲಿ-ಆಲ್ಮೋರದ ಮೂಲಕ ಹಿಮಾಲಯ ಶ್ರೇಣಿಯನ್ನು ಪ್ರವೇಶಿಸುತ್ತಾ ಕಾಳೀ ನದಿಯಂಚಿನಲ್ಲಿ ಹಿಮಾಲಯವನ್ನು ದಾಟಿ ಟಿಬೆಟ್ ಪ್ರದೇಶದ ಮೂಲಕ ಕೈಲಾಸ ಮಾನಸ
ಸರೋವರವನ್ನು ಸಂದರ್ಶಿಸಿ, ಪುನಃ ಅದೇ ಮಾರ್ಗದಲ್ಲಿ ಹಿಂದಿರುಗುವುದು. ಇದಕ್ಕೆ ಬೇಕಾಗುವ ಕಾಲಾವಧಿ ೩೦ ದಿನಗಳು.
ಎರಡನೇ ಮಾರ್ಗ, ನೇಪಾಳದ ಕಠ್ಮಂಡುವಿನಿಂದ ಖಾಸಗಿ ಯಾತ್ರಾ ವಿಮಾನ ಹಾಗೂ ಬಸ್ ಮೂಲಕ.
ಕಠ್ಮಂಡು ಹಾಗೂ ಚೀನಾದ ಗಡಿಭಾಗದ ನ್ಯಾಲಮ್ನಿಂದ ಜಾಂಗ್ಮೂ ಮೂಲಕ ಲ್ಯಾಂಡ್ರೋವರ್ ವಾಹನಗಳಲ್ಲಿ
ಮಾನಸ ಸರೋವರದ ದಡದವರೆಗೂ ಅಂದರೆ, ೧೨೦೦ ಕಿಲೋಮೀಟರ್ ಪ್ರಯಾಣಿಸಿ; ಆನಂತರ ಮೂರು
ದಿನಗಳು ಕೈಲಾಸ ಪರ್ವತದ ಪರಿಕ್ರಮ. ಈ ಪರ್ವತದ ಪ್ರದಕ್ಷಿÀ್ಷಣೆಯ ಉದ್ದ ೫೨ ಕಿಲೋಮೀಟರ್ ನಡಿಗೆಯ ಮೂಲಕ.
ಕೈಲಾಸಪರ್ವತದ ಮೇಲೆ ಹೋಗಲಾಗುವುದಿಲ್ಲ. ಪರ್ವತದ ಬುಡದಲ್ಲಿ ಯಾವುದೇ ಬೃಹತ್ ದೇವಾಲಯಗಳ ಸಂಕೀರ್ಣವಿಲ್ಲ.
ಈ ಪರ್ವತವನ್ನು ಒಂದು ಸುತ್ತು ಹಾಕುವುದೇ (ಪರಿಕ್ರಮಣ). ಯಾತ್ರೆ ಮುಗಿದ ನಂತರ ಬಂದ ದಾರಿಯಲ್ಲಿಯೇ
ಹಿಂದಿರುಗಬೇಕಾಗುತ್ತದೆ. ಇದಕ್ಕೆ ಬೇಕಾಗುವ ಕಾಲ ೧೬ ದಿನಗಳು. ದೆಹಲಿಯಿಂದ ವಿಮಾನದಲ್ಲಿ ಕಠ್ಮಂಡು ಆನಂತರ ಪ್ರಯಾಣ ೧೮ ರಿಂದ ೨೦ ದಿನಗಳು. ಜಗತ್ತಿನ ಪ್ರಮುಖ ಶಿಖರಗಳಲ್ಲಿ ಕೈಲಾಸಪರ್ವತ ಶಿಖರವು ಮಾತ್ರ ಯಾರೂ ಆರೋಹಿಸಲ್ಪಡದೇ ಇದೆ. ಈ ಪರ್ವತವನ್ನು ಆರೋಹಣ ಮಾಡಿದ ಬಗ್ಗೆ ಇದುವರೆಗೂ ಯಾವುದೇ ದಾಖಲೆಗಳಿಲ್ಲ. ಈ ಪರ್ವತವನ್ನು ಏರಲು ಯಾರಿಗೂ ಅನುಮತಿ ದೊರೆತಿಲ್ಲ. ಟಿಬೆಟ್ ಭಾಷೆಯಲ್ಲಿ ಈ ಪರ್ವತದ ಹೆಸರು ‘ರಿನ್- ಫೋ-ಚೆ’ ಇದರ ಅರ್ಥ ಹಿಮದರತ್ನವೆಂದಾಗುತ್ತದೆ. ಜೈನ ಪರಂಪರೆಯಲ್ಲಿ ಈ ಪರ್ವತವನ್ನು ಅಷ್ಟಪಾದ ಎಂದು ಉಲ್ಲೇಖಿಸಲಾಗಿದೆ.
ಧಾರ್ಮಿಕ ಕತೆ ಕೈಲಾಸ ಪರ್ವತದ ಮೇಲೆ ಶಿವ ಮತ್ತು ಹಿಮವಂತನ ಪುತ್ರಿ ಪಾರ್ವತಿದೇವಿಯ ಜೊತೆ ಗಣೇಶ ಮತ್ತು ಶ್ರೀ ಸುಬ್ರಹ್ಮಣ್ಯ ಸ್ವಾಮಿಗಳು ನೆಲೆಸಿದ್ದಾರೆ. ಇಲ್ಲಿ ಪರಶಿವನು ಸದಾ ಧ್ಯಾನಮಗ್ನನಾಗಿರುತ್ತಾನೆ. ಅಲ್ಲದೆ,
ಧನಾಧಿಪತಿಯಾದ ಕುಬೇರನು, ಇದರ ಸ್ವಲ್ಪ ಹತ್ತಿರ ಅಲಕಾಪುರಿ ಪರ್ವತದಲ್ಲಿ ವಾಸವಾಗಿದ್ದಾನೆ. ಹಿಂದೂ ಧರ್ಮದಲ್ಲಿ
ಕೈಲಾಸ ಪರ್ವತವನ್ನು ಸ್ವರ್ಗ, ಆತ್ಮದ ಅಂತಿಮ ನೆಲೆ ಎನ್ನುತ್ತಾರೆ. ಇದು ಜಗತ್ತಿನ ಪರಮೋನ್ನತ ಆಧ್ಯಾತ್ಮಿಕ,
ಧಾರ್ಮಿಕ ಪವಿತ್ರ ಸ್ಥಳವಾಗಿದೆ. ವಿಷ್ಣು ಪುರಾಣದ ಪ್ರಕಾರ, ಕೈಲಾಸ ಪರ್ವತವು ಜಗತ್ತಿನ ಕೇಂದ್ರವಾಗಿದೆ.
ಅದರ ಮುಖಗಳು ಸ್ಫಟಿಕ, ಪದ್ಮರಾಗ, ಸ್ವರ್ಣ ಮತ್ತು ನೀಲ ವೈಢೂರ್ಯದಿಂದ ಮಾಡಲ್ಪಟ್ಟಿದೆ. ಈ ಕೈಲಾಸ ಪರ್ವತವು
ಜಗತ್ತಿನ ಆಧಾರ ಸ್ಥಂಭವಾಗಿದೆ. ಇದು ಪದ್ಮಾಕೃತಿಯಲ್ಲಿ ನಿರ್ಮಿತವಾದ ಆರು ಪರ್ವತ ಶ್ರೇಣಿಗಳ ಕೇಂದ್ರಸ್ಥಾನ. ಹಿಂದೆ
ರಾವಣನು, ತನ್ನ ವಿಮಾನ ದಾರಿಗೆ ಅಡ್ಡವಾಗಿದೆಯೆಂದು ಈ ಕೈಲಾಸಪರ್ವತವನ್ನು ಕಿತ್ತು ಪಕ್ಕಕ್ಕೆ ಹಾಕಬೇಕೆಂದು ಪ್ರಯತ್ನಪಟ್ಟ ಕಥೆಯಿದೆ.
ಕೈಲಾಸ ಪರಿಕ್ರಮಣ ಕೈಲಾಸ ಪರ್ವತ ದರ್ಶನ ಪಡೆಯುವುದೇ ನಮ್ಮ ಭಾಗ್ಯ ಎಂಬುದು
ಯಾತ್ರಿಕರ ಭಾವನೆ. ಈ ಪರ್ವತದ ದರ್ಶನ ಕೆಲವು ಕಿಲೋಮೀಟರ್ ದೂರದಿಂದ ಪಡೆಯಬೇಕು. ಈ ಪರಿಕ್ರಮಣವನ್ನು ಕೆಲವರು ಬರಿಕಾಲಿನಿಂದ ನಡೆದು ಬರುತ್ತಾರೆ. ಇದರ ಸುತ್ತಳತೆ ೫೨ ಕಿಲೋಮೀಟರ್ (೩೨ ಮೈಲಿ), ಇದನ್ನು ಕೆಲವರು ಒಂದೇ ದಿನದಲ್ಲಿ ನಡೆದು ಮುಗಿಸುತ್ತಾರೆ. ಮತ್ತೆ ಕೆಲವರು ಮೂರು ಕಡೆ, ಮೂರು ದಿನ ಉಳಿದುಕೊಂಡು ಪ್ರತಿದಿನ ೧೭ ಕಿಲೋಮೀಟರ್ ನಡೆಯುತ್ತಾ, ಪರಿಕ್ರಮಣ ಮುಗಿಸುತ್ತಾರೆ. ಇಲ್ಲಿ ಬೇರೆ ಯಾವುದೇ ದೇವಾಲಯ ದರ್ಶನವಿಲ್ಲ: ಕೇವಲ ಪರಿಕ್ರಮಣವಷ್ಟೇ ಈ ಯಾತ್ರೆ ಉದ್ದೇಶ. ಆನಂತರ ದರ್ಶನ. ಈ ಪರಿಕ್ರಮಣದ ವೇಳೆ ಹಲವರಿಗೆ ಮಂಡಿ, ಪಾದಗಳು
ಉಬ್ಬಿ ನಡೆಯಲಾಗದ ಸ್ಥಿತಿ, ಬೆರಳುಗಳು, ಕಾಲು ಮಂಡಿಗಳು ಮಡಚಲಾಗದ ಸ್ಥಿತಿಯಾಗುತ್ತದೆ. ಇಲ್ಲಿನ ಶೀತಗಾಳಿಗೆ ಆಮ್ಲಜನಕದ ಕೊರತೆಯಾಗುತ್ತದೆ. ಹವಾಮಾನ ವೈಪರಿತ್ಯವನ್ನು ಎದುರಿಸಬೇಕಾಗುತ್ತದೆ. ಕೆಲವರು ಒಂದೇ ದಿನದಲ್ಲಿ ಈ ಪರ್ವತವನ್ನು ೧೫ ಗಂಟೆಗಳಲ್ಲಿ ಪರಿಕ್ರಮಣ ಮಾಡುತ್ತಾರೆ. ಅಲ್ಲಿ ಉಳಿದುಕೊಳ್ಳಲು ಬಿಡಾರಗಳು, ಸಣ್ಣ ಕಾಫಿ-ಟೀ
ಕೇಂದ್ರಗಳನ್ನು ಸ್ಥಳೀಯರು ನಡೆಸುತ್ತಿದ್ದಾರೆ. ಅಲ್ಲಿ ವಿಶ್ರಮಿಸಿಕೊಂಡು, ಮರುದಿನ ಹೊರಡಬಹುದು. ಆದರೆ ಈ ದಾರಿ ಅಷ್ಟು ಸುಲಭವಲ್ಲ. ಪಾದಚಾರಿ ಮಾರ್ಗ ಕೆಲವು ಕಡೆ ಎದೆಗುಂದಿಸುತ್ತದೆ. ಆದರೂ ಪರ್ವತದ ಮಹಿಮೆಯಿಂದ ಯಾವುದೇ ರೀತಿ ಹೆದರದೆ, ಶಿವನನ್ನು ಸ್ಮರಿಸಿ ಜೈಕಾಹಾಕುತ್ತಾ ಪರಿಕ್ರಮಣ ಮುಗಿಸುತ್ತಾರೆ.
ಚೈನಾ-ಭಾರತ ದೇಶಗಳ ಯುದ್ದ ವಿವಾದದಿಂದ ೧೯೫೧ರಿಂದ ೧೯೮೦gವರಗೆ ಈ ಯಾತ್ರೆಯನ್ನು ಮುಚ್ಚಿದರು.ಅನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತು-ಕಥೆಯಿಂದ ಪ್ರತಿ ವರ್ಷ ನಿರ್ದಿಷ್ಟ ಸಂಖ್ಯೆಯಲ್ಲಿ ಮಾತ್ರ ಈ ಯಾತ್ರೆ ಕೈಗೊಳ್ಳಲು ಅವಕಾಶ ಮಾಡಿಕೊಟ್ಟರು. ಅದೂ ಚೈನಾ ಮತ್ತು ಭಾರತ ದೇಶಗಳ ಸರಕಾರಗಳ ಮೇಲುಸ್ತುವಾರಿಯಿಂದ ಮಾತ್ರ ಅವಕಾಶವಿದೆ. ಕಠ್ಮಂಡುವಿನಿAದ ಲಾಸಾದವರೆಗೂ ವಿಮಾನದಲ್ಲಿ, ಅಲ್ಲಿಂದ ಮುAದೆ ಟಿಬೆಟ್ ನೆಲದಲ್ಲಿ ಕಾರು ಅಥವಾ ಜೀಪಿನಲ್ಲಿ ಪ್ರಯಾಣಿಸಬೇಕು.
ಇದು ಸಮುದ್ರಮಟ್ಟದಿಂದ ೧೫,೧೦೦ ಅಡಿಗಳ ಎತ್ತರದಲ್ಲಿರುತ್ತದೆ. ಇಲ್ಲಿ ವರ್ಷದಲ್ಲಿ ಕೆಲವು ದಿನಗಳು ಮಾತ್ರ ಜನರು ವಾಸವಿರುತ್ತಾರೆ ಅಲ್ಪ ಸ್ವಲ್ಪ ಕಟ್ಟಡಗಳನ್ನು ನೋಡಬಹುದು. ಸುಸಜ್ಜಿತವಾದ ಅತಿಥಿ ನಿಲಯಗಳು ಯಾತ್ರಿಕರಿಗೆ ದೊರೆಯುತ್ತದೆ. ಇಲ್ಲಿ ಸಣ್ಣ ಆರೋಗ್ಯ ಕೇಂದ್ರವಿದೆ. ಈ ಪರ್ವತದ ಸುತ್ತ ಈಗ ಕಾಲು ದಾರಿ ನಿರ್ಮಿಸಿದ್ದಾರೆ.
ನಡೆಯಲಾಗದವರು ಕುದುರೆ ಅಥವಾ ಸಾಕಿದ ಯಾಕ್ ಮೂಲಕ ಕುಳಿತು ಪರಿಕ್ರಮಣ ಮಾಡಬಹುದು.