ಬಾನಂಗಳದಲ್ಲಿ ವಿಹರಿಸುತ್ತಿದ್ದ ಬಿಳಿ ಪಾರಿವಾಳದ ರೆಕ್ಕೆಗಳು ರಕ್ತಸಿಕ್ತವಾಗಿವೆ. ರಷ್ಯಾ ಮತ್ತು ಉಕ್ರೇನ್ ದೇಶಗಳ ನಡುವಿನ
ಯುದ್ಧವೊಂದು ನೆಪಮಾತ್ರವಾಗಿ ಇಡೀ ಜಗತ್ತು ಎರಡು ಬದಿಗಳಲ್ಲಿ ನಿಂತು ಹೋರಾಡುವ ಲಕ್ಷಣಗಳು ಗೋಚರಿಸುತ್ತಿವೆ. ಇದು ಮೂರನೇ ಮಹಾಯುದ್ಧಕ್ಕೆ ಮುನ್ನುಡಿ ಬರೆದಿದೆಯೇ? ಈಗಲೇ ಹೇಳುವುದು ಕಷ್ಟವಾದರೂ ಆ ಆತಂಕವoತೂ ಗಾಢವಾಗಿದೆ. ಕೇವಲ ೪ ಮಿಲಿಯನ್ ಚದರ ಕಿ.ಮೀ. ವಿಸ್ತೀರ್ಣ ಹಾಗೂ ೪೩.೭ ಮಿಲಿಯನ್ ಜನಸಂಖ್ಯೆ ಹೊಂದಿರುವ ಪುಟ್ಟ ರಾಷ್ಟçವೊಂದರ ಮೇಲಿನ ತನ್ನ ಹಳೆಯ ದ್ವೇಷ ಸಾಧಿಸಲು ರಣಾಂಗಣಕ್ಕೆ ನುಗ್ಗಿರುವ ರಷ್ಯಾ ತನ್ನ ಬತ್ತಳಿಕೆಯಲ್ಲಿರುವ ಶಸ್ತಾçಸ್ತçಗಳ ಪ್ರದರ್ಶನಕ್ಕೆ ನಿಂತoತೆ ಕಾಣುತ್ತಿದೆ. ಹೋರಾಟದ ಮೊದಲ ಐದು ದಿನಗಳಲ್ಲೇ ಸಾಕಷ್ಟು ಸಾವು-ನೋವುಗಳು
ಎರಡೂ ಕಡೆಗಳಲ್ಲಿ ವರದಿಯಾಗಿವೆ. ದಾಳಿಯಿಂದ ಚರ್ನೋಬಿಲ್ ಅಣು ಸ್ಥಾವರದಲ್ಲಿ (೧೯೮೬ರಲ್ಲಿ ವಿಕಿರಣ ಸೋರಿಕೆಯಿಂದಾದ ದುರಂತಗಳ ಸರಣಿಯನ್ನು ನೆನಪಿಸಿಕೊಳ್ಳಿ) ವಿಕಿರಣದ ಪ್ರಮಾಣ ಹೆಚ್ಚುತ್ತಿದೆ ಎಂದು ಉಕ್ರೇನ್ ಆತಂಕಕಾರಿ ಹೇಳಿಕೆ ನೀಡಿರುವ ಬೆನ್ನಲ್ಲೇ ರಷ್ಯಾ ಅಣ್ವಸ್ತçಗಳ ಪ್ರಯೋಗಕ್ಕೆ ಮುಂದಾಗಿರುವುದು ದಿಗಿಲು ಹುಟ್ಟಿಸುತ್ತಿದೆ.
ಗುಬ್ಬಿಯ ಮೇಲೇಕೆ ಬ್ರಹ್ಮಾಸ್ತç?
ವೈದ್ಯಕೀಯ ಶಿಕ್ಷಣ, ಕೃಷಿ(ಆಹಾರದ ಬುಟ್ಟಿ ಎಂಬ ಅನ್ವರ್ಥವೂ ಇದೆ), ಗಣಿಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೆ ಜಗದ್ವಿಖ್ಯಾತವಾಗಿರುವ ಉಕ್ರೇನ್ ನ್ಯಾಟೋ ಸದಸ್ಯತ್ವ ಪಡೆದರೆ ಅದಕ್ಕೆ ಸದಸ್ಯ ರಾಷ್ಟçಗಳ ಬೆಂಬಲ ಸಿಗುತ್ತದೆ. ತನ್ನ ಸಾರ್ವಭೌಮತ್ವಕ್ಕೆ ಧಕ್ಕೆಯಾಗುತ್ತದೆ – ಎನ್ನುವುದು ರಷ್ಯಾದ ಚಿಂತೆ. ಸೋವಿಯತ್ ಒಕ್ಕೂಟ ಅಖಂಡವಾಗಿದ್ದಾಗ ತನ್ನದೇ ಭಾಗವಾಗಿದ್ದ ಉಕ್ರೇನ್ ಶೀತಲ ಯುದ್ಧದ ಬಳಿಕ ಸ್ವತಂತ್ರ ರಾಷ್ಟçವಾಗಿ ರಷ್ಯಾಕ್ಕೆ ಮಗ್ಗುಲ ಮುಳ್ಳಾಗಿದೆಯೇ? ಗಾತ್ರದಲ್ಲೂ, ಶಕ್ತಿಯಲ್ಲೂ ತನಗೆ ಸಮಬಲಕ್ಕಿಲ್ಲದ ಉಕ್ರೇನ್ ಮೇಲೆ ರಷ್ಯಾ ಮುಗಿಬಿದ್ದಿರುವುದೇಕೆ? ಸೋವಿಯತ್ ಒಕ್ಕೂಟದ ಪತನವು ಈ ಎಲ್ಲ ಸಂಘರ್ಷದ ಆರಂಭ ಬಿಂದು. ಇದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಎಂದಿಗೂ ಸ್ವೀಕಾರಾರ್ಹ ಆಗಿರಲಿಲ್ಲ. “ಯಾವುದೇ ಇತಿಹಾಸ, ಗುರುತು ಅಥವಾ ‘ನೈಜ ರಾಜ್ಯತ್ವದ ಸ್ಥಿರ ಸಂಪ್ರದಾಯಗಳು’ ಇಲ್ಲದ ನಕಲಿ ದೇಶ” ಎಂದು ಉಕ್ರೇನ್ ಅನ್ನು ಪುಟಿನ್ ಲೇವಡಿ ಮಾಡಿರುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು.
ಸರ್ವಾಧಿಕಾರಿಗಳ ದಾಹ
ಹಾಗೆ ನೋಡಿದರೆ ರಕ್ತಪಾತಗಳಿಂದಲೇ ಇತಿಹಾಸ ನಿರ್ಮಾಣವಾಗಿದೆ. ಆ ಕಾಲದ ಸರ್ವಾಧಿಕಾರಿಗಳಾದ ಹಿಟ್ಲರ್, ಮುಸಲೋನಿಯಿಂದ ಆರಂಭಿಸಿ, ಸದ್ದಾo ಹುಸೇನ್, ಈಗ ಜಗತ್ತನ್ನೇ ಆಳಲು ತವಕಿಸುತ್ತಿರುವ ಪುಟಿನ್ ಕ್ಸಿ-ಜಿಂಗ್ಪಿನ್, ಕಿಮ್ ಜಾಂಗ್ ಉನ್, ಟ್ರಂಪ್, ಜೋ ಬಿಡೆನ್ – ಯಾರೂ ಹೊರತಲ್ಲ. ಹೆಣಗಳ ರಾಶಿಯ ಮೇಲೆ ಸಾಮ್ರಾಜ್ಯ ಕಟ್ಟುವ ಖಯಾಲಿ
ಇವರದು. ಧನದಾಹ, ಅಧಿಕಾರದ ಮೋಹ, ಸರ್ವಾಧಿಕಾರಿ ಮನೋಭಾವ ಜನರನ್ನು ಸಮರಕ್ಕೆ ಪ್ರೇರೇಪಿಸುತ್ತವೆ. ಗುಂಡು, ಬಾಂಬ್, ಕ್ಷಿಪಣಿ, ಯುದ್ಧವಿಮಾನಗಳು, ಟ್ಯಾಂಕರ್ಗಳ ಅಬ್ಬರದ ನಡುವೆ ಭಾರತವು ಜಪಿಸುತ್ತಿರುವ ಶಾಂತಿ ಮಂತ್ರ ಯಾರ ಕಿವಿಗೂ ಕೇಳಿಸುತ್ತಿಲ್ಲ. ಯುದ್ಧಭೂಮಿಗೆ ಹೋಗಿ, ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಕರೆ ತರುವಲ್ಲಿ ಭಾರತವು ತೋರಿದ ಧೈರ್ಯವನ್ನು ಜಗತ್ತೇ ಶ್ಲಾಘಿಸಿದೆ. ಒಬ್ಬರಿಗೆ ಹೆಣಗಳನ್ನು ಉರುಳಿಸುವ ಆತುರವಾದರೆ, ಮತ್ತೊಬ್ಬರಿಗೆ ಜೀವ ಉಳಿಸುವ ಕಾಳಜಿ. ಜಗತ್ತಿನಲ್ಲಿರುವ ಅರ್ಧಕ್ಕಿಂತಲೂ ಹೆಚ್ಚಿನ ಶ್ರಮಿಕ ವರ್ಗದ ನೆಮ್ಮದಿಯ ನಿದ್ದೆಯನ್ನೂ ಯುದ್ಧವು ಕಸಿದುಕೊಂಡಿವೆ, ಗೆದ್ದವನು ಸೋತ, ಸೋತವನು ಸತ್ತ – ಅನ್ನುತ್ತಾರಲ್ಲವೇ? ಹಾಗಿದೆ ಸ್ಥಿತಿ.
ಮೂರನೇ ಮಹಾಯುದ್ಧದ ಭೀತಿ
ಮೊದಲ ಎರಡು ಮಹಾಯುದ್ಧಗಳು ಮಾತ್ರವಲ್ಲ, ಜಗತ್ತಿನೆಲ್ಲೆಡೆ ಅಂತಹ ಘೋರ ಯುದ್ಧಗಳು ಆಗಾಗ ನಡೆಯುತ್ತಲೇ ಇವೆ. ಈಗ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧವು ಮೂರನೇ ಮಹಾಯುದ್ಧಕ್ಕೆ ದಾರಿ ಮಾಡಿಕೊಡಬಹುದು ಎನ್ನುವ ಭೀತಿಗೂ ಕಾರಣವಿದೆ. ನ್ಯಾಟೋ, ಯುರೋಪಿಯನ್ ಯೂನಿಯನ್, ಸಂಘಟನೆಗಳು, ಅಮೆರಿಕ, ಯುಕೆ, ಫ್ರಾನ್ಸ್, ಕೆನಡಾ, ಆಸ್ಟೆçÃಲಿಯಾಗಳು ಉಕ್ರೇನ್ ಪರ ನಿಂತಿದ್ದರೆ. ಚೀನಾದoತಹ ದೇಶಗಳು ರಷ್ಯಾದ ಜತೆಗಿವೆ. ಇಂಗ್ಲoಡ್ ರಷ್ಯಾದ ಐದು
ಬ್ಯಾಂಕುಗಳ ಆಸ್ತಿಗ ಳನ್ನು ಜಪ್ತಿ ಮಾಡಿಕೊಂಡರೆ, ಜರ್ಮನಿ ಪೈಪ್ಲೈನ್ ಯೋಜನೆ ಸ್ಥಗಿತಗೊಳಿಸಿ
ರಷ್ಯಾಗೆ ಶಾಕ್ ನೀಡಿದೆ. ಇಂತಹ ನಿರ್ಬಂಧ- ನಿಷೇಧಗಳಿಗೆ ಸೆಡ್ಡು ಹೊಡೆದಿರುವ ರಷ್ಯಾ ತನ್ನ ದಾರಿಯಲ್ಲಿ ಮುನ್ನಡೆದಿದೆ. ಶಾಂತಿ ಸ್ಥಾಪನೆಗಾಗಿ ಎರಡು ಸುತ್ತಿನ ಮಾತುಕತೆಗಳು ಫಲಪ್ರದವಾಗಿಲ್ಲ. ಈಗ ರಷ್ಯಾ ಅಥವಾ ಉಕ್ರೇನ್ ಬೆಂಬಲಕ್ಕೆ ನಿಂತವರಿಗೆ ಆಯಾ ದೇಶಗಳ ಹಾಗೂ ಅಲ್ಲಿನ ಜನರ ಮೇಲೆ ಪ್ರೀತಿಯಿದೆಯೇ? ಸರ್ವಥಾ ಇಲ್ಲ. ಉರಿವ ಬೆಂಕಿಯಲ್ಲಿ ಸಿಗರೇಟು ಹೊತ್ತಿಸಿಕೊಳ್ಳುವ ಯತ್ನ ಇವರದು. ಅಮೆರಿಕಕ್ಕೆ ಚೀನವನ್ನು ಕಂಡರಾಗದು. ಚೀನಾ ಹಾಗೂ ರಷ್ಯಾದ ಸಖ್ಯ ಬೆಳೆಸದಿದ್ದರೆ ಪಾಕಿಸ್ತಾನಕ್ಕೆ ಗತಿಯಿಲ್ಲ… ಹೀಗೆ ಪಟ್ಟಿ ಮುಂದುವರಿಯುತ್ತದೆ.
ಮಗ್ಗುಲ ಮುಳ್ಳುಗಳು
ಬಹುತೇಕ ಎಲ್ಲ ದೇಶಗಳಿಗೂ ತಮ್ಮ ನೆರೆಯ ರಾಷ್ಟçಗಳಿಂದ ಕಾಟ ತಪ್ಪಿದ್ದಲ್ಲ. ಭಾರತಕ್ಕೆ ಪಾಕಿಸ್ತಾನ, ಚೀನಾ ಎರಡೂ ಸಾಂಪ್ರದಾಯಿಕ ವೈರಿಗಳೇ. ನೇರ ಯುದ್ಧಗಳಲ್ಲಿ ಗೆಲ್ಲಲಾರದ ಕುತಂತ್ರಿ ಪಾಕಿಸ್ತಾನ ಭಯೋತ್ಪಾದಕರ ಮೂಲಕ ಭಾರತದ ಮೇಲೆ ಸಮರ ಸಾರುತ್ತಿದೆ. ಚೀನಾ ಗಡಿ ತಂಟೆಯಲ್ಲಿ ಸದಾ ಮುಂದೆ. ಪೂರ್ವ ಲಡಾಖ್ನ ಗಾಲ್ವನ್ ಕಣಿವೆ, ಪ್ಯಾಂಗಾoಗ್ ಸರೋವರ,, ಡೋಕ್ಲಾ ಮುಖಾಮುಖಿಗಳು, ಈಚೆಗೆ ಭಾರಿ ಆತಂಕವನ್ನು ಸೃಷ್ಟಿಸಿದ್ದವು. ಆದರೆ, ಭಾರತದ ದಿಟ್ಟತನ ಹಾಗೂ ಸಹನೆಯಿಂದ ವಿಚಲಿತವಾದ ಚೀನಾ ಸದ್ಯಕ್ಕೆ ಹಿಂದೆ ಸರಿದಿದೆ. ಕೆಲವು ವರ್ಷಗಳ ಹಿಂದೆ ಶ್ರೀಲಂಕಾದಲ್ಲಿ ಪ್ರಬಲವಾಗಿದ್ದ ಎಲ್ಟಿಟಿಇ ಭಾರತಕ್ಕೂ ಸವಾಲಾಗಿತ್ತು. ಇರಾನ್-ಇರಾಕ್ ಯುದ್ಧ ಎಂಟು ವರ್ಷಗಳಿಗೂ ಹೆಚ್ಚು ಅವಧಿಗೆ ನಡೆದಿತ್ತು. ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಸಂಘರ್ಷವೂ ಮುಗಿಯದ ಕಥೆ. ಉತ್ತರ ಕೊರಿಯಾ-ದಕ್ಷಿಣ ಕೊರಿಯಾಗಳೂ ಹೀಗೇ ಹೊಡೆದಾಡಿಕೊಳ್ಳುತ್ತಿದ್ದವು. ಕೊಲ್ಲಿ ರಾಷ್ಟçಗಳಲ್ಲಿ ನಡೆದಿರುವ ಯುದ್ಧಗಳಿಗೆ ತೈಲ ಸಂಪತ್ತೇ ಕಾರಣವಾಗಿತ್ತು.
ಮನುಷ್ಯ ಅತ್ಯಂತ ವಿಕಸಿತ ಜೀವಿ. ಆತನಿಗೆ ಹೃದಯವಿದೆ, ಮನಸ್ಸಿದೆ, ಬುದ್ಧಿಶಕ್ತಿ ಇದೆ, ಯೋಚನಾ ಸಾಮರ್ಥ್ಯವಿದೆ. ಪ್ರಾಣಿಗಳೇನೋ ಹಸಿದಾಗ ಅಥವಾ ಕೆಣಕಿದಾಗ ಕಾದಾಡಿಕೊಳ್ಳುತ್ತವೆ. ಆದರೆ, ಇಂತಹ ಯುದ್ಧೋನ್ಮಾದ,
ರಕ್ತ ದಾಹ, ಇನ್ನೊಬ್ಬರ ಮನೆಗೆ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುವ ತವಕ ಮನುಷ್ಯನಿಗೇಕಿದೆ? ಯಾರ ಮೇಲೋ ಆಕ್ರಮಣ ಮಾಡಿದರೆ, ಕೊಂದರೆ, ಸoಪತ್ತನ್ನು ಕಸಿದರೆ, ಹೆಂಗಸರನ್ನು ಎಳೆದು ತಂದರೆ, ಮಕ್ಕಳನ್ನು
ನೋಯಿಸಿದರೆ ಏನು ಸಿಗುತ್ತದೆ? ಒಂದು ವಿಕೃತ ಆನಂದ! ಅಷ್ಟು ಮಾತ್ರಕ್ಕೆ ಮನುಷ್ಯ ಎಂತಹ ವಿಧ್ವಂಸಕ ಕೃತ್ಯಗಳಿಗೂ ಸಿದ್ಧ. ಇದು ಜಗತ್ತಿನ ದುರಂತ ಕಥನ. ಮನೆ-ಮನಗಳನ್ನು ಬೆಳಗುವ ವಿದ್ಯುತ್ ಕೊಡುವ ಪರಮಾಣುವನ್ನು ಮನುಕುಲವನ್ನೇ ಸುಡುವ ಬಾಂಬ್ ತಯಾರಿಕೆಗೂ ಬಳಸಲಾಗುತ್ತದೆ. ಕತ್ತಿಯನ್ನು ಕೃಷಿಗೂ ಬಳಸಬಹುದು, ಅದರಿಂದ ಯಾರ ಕತ್ತನ್ನಾದರೂ ಕತ್ತರಿಸಬಹುದು. ವಸ್ತು-ವಿಷಯಗಳನ್ನು ನಾವು ಹೇಗೆ ಬಳಸುತ್ತೇವೋ ಅದರ ಫಲವೂ ಹಾಗೇ ಇರುತ್ತದೆ. ಬೇವು ಬಿತ್ತಿ ಮಾವು ಬೆಳೆಯಲು ಸಾಧ್ಯವಿಲ್ಲ ಅಲ್ಲವೇ?
ನೆನಪಾಯಿತು ಐನ್ಸ್ಟೀನ್ ಮಾತು
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವ ಗಾದೆಯಂತೆ ಹಲವು ವರ್ಷಗಳ ಕಾಲ ಶ್ರಮಿಸಿ ನಿರ್ಮಿಸಿದ ರಸ್ತೆ, ಸೇತುವೆ, ಕಟ್ಟಡ, ಕಾರ್ಖಾನೆ, ಜಲಾಶಯ, ವಿದ್ಯುತ್ ಸ್ಥಾವರ – ಇವೆಲ್ಲ ಯುದ್ಧಗಳಿಂದ ಕ್ಷಣಾರ್ಧದಲ್ಲಿ ನೆಲಸಮವಾಗುತ್ತವೆ. ಈ ವಿನಾಶದಿಂದ ನೋವು, ಕಣ್ಣೀರೇ ಶಾಶ್ವತವಾಗುತ್ತದೆ. ೧೯೪೫ರಲ್ಲಿ ಹಿರೋಶಿಮಾ-ನಾಗಾಸಾಕಿ ನಗರಗಳ ಮೇಲೆ ಅಮೆರಿಕ ಬೀಳಿಸಿದ ಬಾಂಬ್ಗಳ ದುಷ್ಪರಿಣಾಮಗಳು ಬರಿಯ ಜಪಾನ್ ಮಾತ್ರವಲ್ಲ, ಇಡೀ ಜಗತ್ತನ್ನೇ ಇಂದಿಗೂ ಕಾಡುತ್ತಿವೆ. ಇನ್ನು, ಈ ಬಾರಿ ಮೂರನೇ ಮಹಾಯುದ್ಧ ನಡೆದರೆ ಅದರ ಪರಿಣಾಮ ಘೋರವಾಗುತ್ತದೆ. ಅಳುವುದಕ್ಕಾದರೂ ಜನರು ಉಳಿದಾರೆಂಬ ನಿರೀಕ್ಷೆ ಇಲ್ಲ. `ನನಗೆ ಮೂರನೇ ಮಹಾಯುದ್ಧ ಯಾವ ಆಯುಧಗಳಿಂದ ನಡೆಯುತ್ತದೆ ಎನ್ನುವುದಕ್ಕಿಂತ
ನಾಲ್ಕನೇ ಮಹಾಯುದ್ಧ ಮಾತ್ರ ಕಲ್ಲು ಮತ್ತು ಕೋಲಿನಿಂದ ನಡೆಯುತ್ತದೆ ಎಂಬುದು ತಿಳಿದಿದೆ’ ಎಂದು ಭೌತ ವಿಜ್ಞಾನಿ ಐನ್ಸ್ಟೀನ್ ಅರ್ಧ ಶತಮಾನಕ್ಕಿಂತಲೂ ಹೆಚ್ಚು ಹಿಂದೆಯೇ ಹೇಳಿರುವುದು ಎಷ್ಟೊಂದು ಮಾರ್ಮಿಕವಾಗಿದೆ! ಈಗ ಅಣು, ಮುಂದೆ ರೇಣು, ತೃಣ ಹಾಗೂ ಕಾಷ್ಟ! ಯುದ್ಧವೋ? ಶಾಂತಿಯೋ? ರಷ್ಯಾ ಮಾಡಿಕೊಂಡಿರುವ ಆಯ್ಕೆಯನ್ನು ನೋಡಿ ಲಿಯೋ ಟಾಲ್ಸ್ಟಾಯ್ಯಂತಹ ಸಾಹಿತಿಗಳು, ದಾರ್ಶನಿಕರು, ಗಾಂಧಿಯoತಹ ಶಾಂತಿಪ್ರಿಯರು ಮೌನವಾಗಿ ರೋದಿಸುತ್ತಿರಬಹುದು. ಆ ಕಣ್ಣೀರಾದರೂ ಈ ಕಿಡಿಯನ್ನು ಆರಿಸಲಿ ಎನ್ನುವ ನಿರೀಕ್ಷೆ ಜಗತ್ತಿಗಿದೆ.