ರವಿತೇಜನ ಮನಸ್ಸು ತೀರಾ ಭಾರವಾಗಿತ್ತು. ಅಪ್ಪ ತೀರಿಕೊಂಡು ಎರಡು ದಿನಗಳಾಗಿತ್ತು ಅಷ್ಟೇ. ಒಡಹುಟ್ಟಿದ ಅಣ್ಣ, ಅಕ್ಕನ ನಡವಳಿಕೆಯಲ್ಲಿ ಯಥೇಚ್ಛವಾಗಿ ಅನಾದರ ಕಂಡುಬರುತ್ತಿತ್ತು. ಸ್ವಂತ ತಮ್ಮನ ಮೇಲೆ ಈ ಮಟ್ಟಿಗಿನ ಅಸೂಯೆಯಾ?ಅಸಹನೆಯಾ? ಈ ಪ್ರಶ್ನೆಗೆ ಉತ್ತರವಿರಲಿಲ್ಲ.
* * *
ಮಲೆನಾಡ ಗರ್ಭದಲ್ಲಿನ, ಆಧುನಿಕತೆಯಿಂದ ಬಹಳಷ್ಟು ದೂರ ಉಳಿದಿದ್ದ ಸಣ್ಣ ಗ್ರಾಮ. ನಂಜಯ್ಯ ರೇವತಿ ದಂಪತಿಗಳು, ಅವರ ಮೂರು ಮಕ್ಕಳಿದ್ದ ತುಂಬು ಸಂಸಾರ. ಹಿರಿಂiÄÀ ರಿಂz À ಬಂz À ¥ಲÀs ªತ Áz್ತ À
ಜಮೀನಿತ್ತು. ಪಾಲಾಗಿರದುದ್ದರಿಂದ ಅಷ್ಟೂ ಜಮೀನಿನಲ್ಲಿ ಉಳುಮೆ ಮಾಡಬಹುದಿತ್ತು. ಹೊಟ್ಟೆ ಬಟ್ಟೆಗೆ ಯೋಚಿಸುವ ಹಾಗೆ ಇರಲಿಲ್ಲ. ಆದರೂ, ಒಮ್ಮೊಮ್ಮೆ ನಂಜಯ್ಯನ ಕೈ ಖಾಲಿಯಾಗುತ್ತಿದ್ದದ್ದೂ ಸತ್ಯ. ಈ ದಂಪತಿಗಳ ಹಿರಿಯ ಮಗ ಚಂದ್ರಶೇಖರ, ಮಧ್ಯಕ್ಕೆ ಮಾಧವಿ, ಕಡೆಗೆ ರವಿತೇಜ. ಎಲ್ಲರಿಗೂ ಹೆಚ್ಚುಕಮ್ಮಿ ಎರಡು ಮೂರು ವರ್ಷಗಳ ಅಂತರ.
ರವಿತೇಜ ಐದನೇ ಕ್ಲಾಸಿನಲ್ಲಿದ್ದಾಗ, ಮಳೆಗಾಲದಲ್ಲಿ ವರುಣನ ಅಟ್ಟಹಾಸಕ್ಕೆ ಸಿಲುಕಿ ವರ್ಷದ ಬೆಳೆ ಕೈಗೆ ಬರಲಿಲ್ಲ. ಕನಿಷ್ಠ ಬೀಜ, ಗೊಬ್ಬರಕ್ಕೆ ಖರ್ಚಾಗಿದ್ದ ಹಣವೂ ಗಿಟ್ಟಲಿಲ್ಲ. ಇದಕ್ಕೆ ಆರು ತಿಂಗಳ ಮುoಚೆಯಷ್ಟೇ ಇದ್ದಬದ್ದ ಉಳಿಕೆ ಹಣವನ್ನೆಲ್ಲ ಸೇರಿಸಿ ಗದ್ದೆಯ ಬದಿಗಿದ್ದ ಅಡಿಕೆ ತೋಟ ಕೊಂಡುಕೊoಡಿದ್ದರು ನಂಜಯ್ಯ. ತೋಟವೆಂದರೆ ಫಲ ಕೊಡುವ ಉದ್ದದ ಮರಗಳಿದ್ದುದಲ್ಲ, ಇತ್ತೀಚೆಗಷ್ಟೇ ನೆಟ್ಟಿದ್ದ ಅಡಿಕೆ ಸಸಿಗಳಿದ್ದದ್ದು. ಮುಂದಕ್ಕೆoದಾದರೂ ಮರಗಳು ಸೊಂಪಾಗಿ ಬೆಳೆದಾಗ ಆದಾಯಕ್ಕೆ ಇನ್ನೊಂದು ಮೂಲವಾದೀತು ಎಂಬ ಮುಂದಾಲೋಚನೆಯಲ್ಲಿ ಕೊಂಡದ್ದು. ವಿಪರ್ಯಾಸವೆoದರೆ, ಅಲ್ಲಿಂದಲೇ ಆ ಕುಟುಂಬಕ್ಕೆ ದರಿದ್ರ ಅಂಟಿಕೊoಡಿತ್ತು. ದೂರದ ಚಂಡೀಘಡದಲ್ಲಿದ್ದ ನಂಜಯ್ಯನ ಅಣ್ಣ ಹಣದ ತಾಪತ್ರಯ ಬಂದು ಅವನ ಪಾಲಿನ ಹೊಲವನ್ನು ಮಾರಿಕೊಂಡ. ಉಳುಮೆಗೆ ಸಿಗುತ್ತಿದ್ದ ನೆಲ ಅರ್ಧವಾಯಿತು. ಆರ್ಥಿಕವಾಗಿ ಕೈ ಕಟ್ಟಿ ಹೋಗುವ ಪರಿಸ್ಥಿತಿ ಎದುರಾದಾಗ ನಂಜಯ್ಯ ರೇವತಿ ಇಬ್ಬರೂ ಆಚೀಚೆಯ ಹೊಲ ಗದ್ದೆಗಳಿಗೆ
ದಿನಗೂಲಿಗೆ ಹೋಗತೊಡಗಿದ್ದರು. ಚಂದ್ರಶೇಖರ ಆಗ ಎಸ್. ಎಸ್. ಎಲ್.ಸಿ.ಯಲ್ಲಿದ್ದ. ನಮ್ಮೂರಲ್ಲಿ ಹೈಸ್ಕೂಲು ಇಲ್ಲದ
ಕಾರಣ ದಿನಾ ಬೇರೆ ಹಳ್ಳಿಗೆ ಪ್ರಯಾಣ ಮಾಡುತ್ತಿದ್ದ. ಮನೆಯಲ್ಲಿ ಎಷ್ಟೇ ಕಷ್ಟವಿದ್ದರೂ ಮಕ್ಕಳ ಓದಿಗೆ ಮಾತ್ರ ದಂಪತಿಗಳ ಪ್ರೋತ್ಸಾಹ ಇದ್ದೇ ಇತ್ತು. ಅಪ್ಪ ಅಮ್ಮನ ಆಕಾಂಕ್ಷೆಗಳಿಗೆ ನೀರೆರಚುವಂತೆ ಚoದ್ರ ಪರೀಕ್ಷೆಯಲ್ಲಿ ಫೇಲಾಗಿದ್ದ. ಸಪ್ಲಿಮೆಂಟರಿ ಬರೆದ. ಅಲ್ಲೂ ನಪಾಸು. ಅದಾದ ಮೇಲೆ ಪ್ರತೀವರ್ಷ ಪರೀಕ್ಷೆ ಕಟ್ಟುವುದು, ಡುಮ್ಕಿ ಹೊಡೆಯುವುದು ಮಾಮೂಲಾಯಿತು.
ನಾಲ್ಕನೆಯ ಬಾರಿಗೆ ಕಡೆಗೂ ಜಸ್ಟ್ ಪಾಸ್ ಆಗುವಲ್ಲಿ ಸಫಲನಾಗಿದ್ದ. ಇಷ್ಟು ವರ್ಷಗಳಲ್ಲಿ ಜಮೀನು, ಜಾನುವಾರುಗಳ ಕಡೆ ಗಮನ ಹರಿಸಿದ್ದ ಆತನಿಗೆ ಇನ್ನು ಮುಂದೆ ಓದುವ ಮನಸ್ಸಿರಲಿಲ್ಲ. ಅಪ್ಪನಿಗೆ ವ್ಯವಸಾಯದಲ್ಲಿ ಬಲಗೈಯಾಗಿ ಉಳಿದುಬಿಟ್ಟ. ಇನ್ನು ಮಾಧವಿ ಪಿಯುಸಿ ಸೇರಿದಳಾದರೂ ಗಂಡು ಹುಡುಗರ ಛೇಡಿಸುವಿಕೆ, ಪ್ರೇಮಪತ್ರಗಳ ಪ್ರಕರಣವಾದ ನಂತರ ಆಕೆಯೂ ಓದಿಗೆ ತಿಲಾಂಜಲಿ ಇಟ್ಟು ಮನೆಗೆಲಸಕ್ಕೆ ಅಂಟಿಕೊoಡಳು.
ಕೊನೆಗೆ ಉಳಿದದ್ದು ಕಡೆಯವ ರವಿ. ರೇವತಿ ಕಿರಿಮಗನನ್ನು ಮುದ್ದಿಸಿದಷ್ಟೇ “ನೀನಾದ್ರೂ ಚಂದಾಗಿ ಓದು ಮಗ.ಓದಿ ಒಳ್ಳೆ ಕೆಲಸ ತಕ.. ನೀನು ಕೆಲ್ಸ ತಕಂಡು ಸಂಬ್ಳ ಎಣಿಸ್ಕೊಂಡಾಗ್ಲೇ ನಮ್ಮನೆಯ ದರಿದ್ರ ಕಳೆಯೋದು. ನಿಂಗಾದ್ರೂ ವಿದ್ಯೆ ಚೆನ್ನಾಗಿ ತಲೆಗೆ ಹತ್ಲಿ” ಎಂದು ತಲೆಸವರುತ್ತಿದ್ದರು. ರವಿ ಬುದ್ಧಿ ಬಂದಾಗಿನಿoದಲೂ ಅಪ್ಪ ಅಮ್ಮ ಕಾಸು ಕಾಸಿಗೂ ಕಷ್ಟಪಡುವುದನ್ನು ಕಂಡಿದ್ದ. ಹೆತ್ತವರು ಮಕ್ಕಳು ಚೆನ್ನಾಗಿ ಓದಿ ಮುಂದೆ ಬರಬೇಕು ಅಂತ ಬಯಸುವುದನ್ನು ಅರಿತಿದ್ದ. ಓದಿನಲ್ಲಿ ಅವನ ಪ್ರಾಮಾಣಿಕ ಪ್ರಯತ್ನ ಇದ್ದೇ ಇತ್ತು. ಅವ ಒಂಭತ್ತನೇ ಕ್ಲಾಸಿನಲ್ಲಿದ್ದಾಗ ಅಕ್ಕ, ಅಣ್ಣ ತಮಾಷೆಯಾಗಿ ‘ನೀನು ಎಸ್.ಎಸ್.ಎಲ್.ಸಿ. ಪಾಸಾಗುವುದೇ ಇಲ್ಲ ಬಿಡು’ ಎಂದು ಅಣಕಿಸಿಬಿಟ್ಟಿದ್ದರು. ಅಲ್ಲಿಂದ ಕಿಡಿ ಹೊತ್ತಿಕೊಂಡು ಬಿಟ್ಟಿತು. ಇವರಿಬ್ಬರಿಗೂ ಬುದ್ದಿ ಕಲಿಸಲಾದರೂ ತಾನು ಚೆನ್ನಾಗಿ ಓದಿ ಪರೀಕ್ಷೆ ಪಾಸು ಮಾಡಬೇಕು ಎಂದು ನಿರ್ಧರಿಸಿಬಿಟ್ಟಿದ್ದ. ಅತ್ಯಂತ ಶ್ರದ್ಧೆಯ ಫಲವೋ, ಒಡಹುಟ್ಟಿದವರ ಮೇಲಿನ ಛಲವೋ, ಹತ್ತನೇ ಕ್ಲಾಸು ಡಿಸ್ಟಿಂಕ್ಷನ್ನಲ್ಲಿ ಪಾಸಾಯಿತು. ಪಿ.ಯು.ಸಿ.ಯಲ್ಲೂ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾದ. ಈ ನಡುವೆ ಮಾಧವಿ ಮದುವೆಯಾಗಿ
ಹೋದಳು. ರವಿಗೆ ಇಂಜಿನಿಯರಿoಗ್ಗೆ ಸೀಟ್ ಸಿಕ್ಕಿದಾಗ ಫೀಜಿನ ಬಾಬತ್ತು ನಂಜಯ್ಯನ ಕೈಮೀರಿದ ಖರ್ಚಾಗಿತ್ತು. ಬ್ಯಾಂಕ್ನಲ್ಲಿ ಸಾಲ ತೆಗೆಸಿದರು. ಅಲ್ಲಿಂದ ರವಿಯ ಅದೃಷ್ಟವೇ ಖುಲಾಯಿಸಿತು. ಓದು ಮುಗಿಯುತ್ತಿದ್ದಂತೆ ಕೆಲಸ ದಕ್ಕಿತು. ಪ್ರತೀ ತಿಂಗಳು ಸಂಬಳದಲ್ಲಿ ತನ್ನ ಖರ್ಚು ಕಳೆದು ಮಿಕ್ಕಿದ ಅಷ್ಟೂ ದುಡ್ಡನ್ನು ಅಪ್ಪನಿಗೆ ಕಳುಹಿಸುತ್ತಿದ್ದ. ಅಡಿಕೆ ತೋಟದಿಂದಲೂ ಆದಾಯವಿತ್ತು. ಕುಟುಂಬ ಹಣಕಾಸಿನ ವಿಷಯದಲ್ಲಿ ಬಹುವಾಗಿ ಚೇತರಿಸಿಕೊಂಡಿತು.
ನoಜಯ್ಯ ದಂಪತಿಗಳಿಗೆ ಒಬ್ಬ ಮಗನಾದರೂ ಚೆನ್ನಾಗಿ ಓದಿ ಕೆಲಸ ಗಿಟ್ಟಿಸಿಕೊಂಡದ್ದು ಮಹತ್ತರ ಸಂತೋಷದ ಸಂಗತಿ. ಆ ಸಣ್ಣ ಗ್ರಾಮಕ್ಕೆ ರವಿತೇಜನೇ ಮೊಟ್ಟ ಮೊದಲ ಅಭಿಯಂತರ! ಊರಲ್ಲಿ ನಂಜಯ್ಯ ರೇವತಿಯರಿಗಿದ್ದ ಗೌರವ ದುಪ್ಪಟ್ಟಾಯಿತು. ತಂದೆ ತಾಯಿ ಸದಾ ಕಿರಿಮಗನ ಗುಣಗಾನ ಮಾಡುವುದು, ಅಭಿಯಂತರನಾದ ರವಿತೇಜನನ್ನು ಹಳ್ಳಿಯ ಜನರೆಲ್ಲ ಆದರಿಸುವುದು, ಹೊಗಳುವುದನ್ನೆಲ್ಲ ಕೇಳಿ ಚಂದ್ರ, ಮಾಧವಿಯರಲ್ಲಿ ಸಣ್ಣ ಅಸೂಯೆ ಆಗಲೇ ಹುಟ್ಟಿಕೊಂಡುಬಿಟ್ಟಿತು. ಬೆoಗಳೂರಲ್ಲಿ ಚಿಕ್ಕದಾಗಿ ಚೊಕ್ಕವಾಗಿದ್ದ ಮನೆಯೊಂದನ್ನು ಬಾಡಿಗೆ ತೆಗೆದುಕೊಂಡ ರವಿ ತಂದೆ ತಾಯಿಯನ್ನು ಅಲ್ಲಿಗೇ ಕರೆಯಿಸಿಕೊಳ್ಳುವ ಯೋಚನೆ ಮಾಡಿದ್ದ. ಅಪ್ಪ ಅಮ್ಮ ಮಕ್ಕಳಿಗಾಗಿ ಪಟ್ಟಿದ್ದ ಪಾಡಿನ ಸಂಪೂರ್ಣ
ಅರಿವಿತ್ತು ಆತನಿಗೆ. ಇನ್ನು ಮೇಲಾದರೂ ತಾನು ಹೆತ್ತವರನ್ನು ಕೂದಲು ಕೊಂಕದಷ್ಟು ಜೋಪಾನವಾಗಿ ನೋಡಿಕೊಳ್ಳಬೇಕೆಂದು ಬಯಸಿದ್ದ. ಆದರೆ ಬದುಕಿನ ಬಹುಪಾಲು ಸಮಯವನ್ನು ಹಳ್ಳಿಯಲ್ಲೇ ಕಳೆದಿದ್ದ ಹಿರಿ ಜೀವಗಳಿಗೆ ಹಳ್ಳಿಯನ್ನು ಬಿಡುವ ಇರಾದೆಯೇ ಇರಲಿಲ್ಲ. ಆಗಾಗ ಕಿರಿಮಗನಿದ್ದಲ್ಲಿಗೆ ಹೋಗುವುದು, ಆತನೂ ಊರಿಗೆ ಬರುವುದು ನಡೆದೇ
ಇತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ಹೆತ್ತವರಿಗೆ ತನಗಿಂತ ರವಿಯಲ್ಲಿಯೇ ವಿಶ್ವಾಸ ಜಾಸ್ತಿ ಎಂದು ಊಹಿಸಿಕೊಂಡು ಚಂದ್ರ ಒಳಗೊಳಗೇ ಬೆಂದುಹೋಗುತ್ತಿದ್ದ.
ಚoದ್ರನಿಗೂ ಮದುವೆಯಾಯಿತು. ಅದೇ ಹೊತ್ತಿಗೆ ರವಿ ಹೊರದೇಶಕ್ಕೆ ಹೋಗುವುದೂ ಖಾತ್ರಿಯಾಯಿತು. ಮದುವೆಗೆ ಬಂದವರೆಲ್ಲ “ರೇವತಿಯಕ್ಕನ ಕಿರಿಮಗ ಫಾರೀನ್ಗೆ ಹೊಂಟವನoತೆ” ಎಂಬ ಬಿಸಿಬಿಸಿ
ಸುದ್ದಿ ಮಾತಾಡುತ್ತಿದ್ದದ್ದು ಅದ್ಯಾಕೋ ಚಂದ್ರನಿಗೆ ಕಹಿಕಹಿ ಎನಿಸಿತ್ತು. ರವಿ ಹೊರದೇಶಕ್ಕೆ ಹಾರಿದ. ಒಂದು ವರ್ಷದ ನಂತರ ಹೆತ್ತವರನ್ನೂ ಬಲವಂತವಾಗಿ ಅಲ್ಲಿಗೆ ಕರೆಯಿಸಿಕೊಂಡ. ಅವನಿಗೆ ಗೊತ್ತಿತ್ತು, ಊರು ಬಿಟ್ಟು ಬೆಂಗಳೂರಿಗೆ ಬರಲೇ ಒಲ್ಲೆ ಎಂದವರು, ಈ ಪರದೇಶದಲ್ಲಿ ನನ್ನೊಡನೆ ಉಳಿದುಬಿಡಿ ಎಂದರೆ ಖಂಡಿತವಾಗಿ ಒಪ್ಪುವುದಿಲ್ಲ ಎಂದು.
ಹಾಗಾಗಿ ಇಪ್ಪತ್ತು ದಿನಗಳ ಮಟ್ಟಿಗೆ ಅಪ್ಪ , ಅಮ್ಮನಿಗೆ ವಿದೇಶ ಪ್ರವಾಸದ ಯೋಜನೆ ಹಾಕಿದ್ದ.
ಅಲ್ಲಿಂದ ವಾಪಸ್ಸು ಬಂದವರನ್ನು ಊರವರೆಲ್ಲ ಬಂದು ಮುತ್ತಿಗೆ ಹಾಕಿ ವಿದೇಶದ ವೈಭೋಗದ ಪ್ರವರ ಕೆದಕುತ್ತಿದ್ದರು. ಒಂದು ಸಣ್ಣ ಪ್ರಮಾಣದಲ್ಲಿ ರೇವತಿ-ನಂಜಯ್ಯ ಆ ಪುಟ್ಟ ಊರಿಗೆ ಸೆಲೆಬ್ರಿಟಿಗಳಾಗಿಬಿಟ್ಟಿದ್ದರು. ವಿದೇಶಕ್ಕೆ ಹೋದ ರವಿ ಅಲ್ಲೇ ಉಳಿದುಬಿಟ್ಟ.
ಇಷ್ಟೆಲ್ಲದರ ನಂತರ ರವಿಯ ವಿಷಯ ಎತ್ತಿದರೆ ಸಾಕು ಸಿಡಿಸಿಡಿಯಾಗುತ್ತಿದ್ದ ಚಂದ್ರ “ಕಿರಿಮಗ ಅಂತ ಅಷ್ಟೊಂದು ಮೆರಸ್ತೀರಲ್ಲ, ನಿಮ್ಮಿಬ್ಬರನ್ನೂ ಸಾಕುತ್ತಿರೋದು, ನೋಡಿಕೊಳ್ತಿರೋದು ನಾನು. ಆದ್ರೆ ನಿಮ್ಗೆ, ನಿಮ್ಮಿಬ್ಬರನ್ನು ಇಲ್ಲಿ ಬಿಟ್ಟು ದೂರದ ದೇಶದಲ್ಲಿ ಮಜವಾಗಿ ಜೀವನ ಮಾಡ್ತಿರೋ ಆ ರವೀನೇ ಹೆಚ್ಚು. ಒಂದೇ ಒಂದಿನ ನಿಮ್ಮನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನಾ? ಹುಷಾರು ತಪ್ಪಿದಾಗ ನೋಡಿಕೊಂಡಿದ್ದಾನಾ? ಮೂರು ಹೊತ್ತೂ ಅವನದ್ದೇ ಜಪ ಆಗಿಹೋಯ್ತು ನಿಮ್ಮಿಬ್ಬರದ್ದು” ಶಲ್ಯ ಕೊಡವಿ ಹೆಗಲಿಗೇರಿಸಿಕೊಂಡು ಸರಿದುಹೋದ. ಚಂದ್ರನೂ ತೋಟ, ಗದ್ದೆಗಳಲ್ಲಿ ಬೆವರಲ್ಲಿಯೇ ತೋಯ್ದು ಹೋಗುವವರೆಗೂ ದುಡಿಯುತ್ತಾನೆ. ಆದರೂ ದೂರದ ದೇಶದಿಂದ ತಮ್ಮ ಕಳುಹಿಸುವ ಮೊತ್ತಕ್ಕೇ ಮನೆಯಲ್ಲಿ ಬೆಲೆ ಹೆಚ್ಚು. ನಿರಂತರವಾಗಿ ರವಿಯ ಗುಣಗಾನ. ಆಗಾಗ ಒಬ್ಬಿಬ್ಬರು “ನೀನೂ ಚೆನ್ನಾಗಿ ಓದಿದ್ದಿದ್ರೆ ರವಿಯ ಹಾಗೆ
ವಿದೇಶದಲ್ಲಿ ಜಮ್ಮೆಂದು ಇರಬಹುದಿತ್ತಾ ಚಂದ್ರಣ್ಣ?” ಎನ್ನುತ್ತಿದ್ದರು. ಅದು ಯಾವುದೇ ದುರುದ್ದೇಶವಿಲ್ಲದೆ ಆಡಿದ ಮಾತುಗಳಾಗಿದ್ದರೂ ಚಂದ್ರನಿಗೆ ಕೊoಕೆನಿಸಿ ಅಸಹನೆ ಕುದಿಯುತ್ತಿತ್ತು. ರವಿ ಊರಕಡೆ ಬಂದು ಮೂರು ವರ್ಷಗಳಾಗಿತ್ತು. ರೇವತಿ, ನಂಜಯ್ಯ ರವಿಗೊoದು ಮದುವೆ ಮಾಡಿಬಿಡುವ ತರಾತುರಿಯಲ್ಲಿ ಅವನ ಬರುವನ್ನೇ ಎದುರು ನೋಡುತ್ತಿದ್ದರು.
ಆದರೆ ವಿಧಿಯ ಉದ್ದಿಶ್ಯ ಬೇರೆಯದೇ ಇತ್ತೇನೋ… ಇದ್ದಕ್ಕಿದ್ದಂತೆ ನoಜಯ್ಯನಿಗೆ ಎದೆನೋವು ಶುರುವಾಯಿತು. ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದರೂ ಅವರು ಉಳಿಯಲಿಲ್ಲ. ರವಿಯ ಮದುವೆಯ ಸಂಭ್ರಮವನ್ನು ಎದುರು ನೋಡುತ್ತಿದ್ದ ಮನೆಯನ್ನು ಸೂತಕ ಆವರಿಸಿಕೊಂಡಿತು. ರವಿ ಓಡೋಡಿ ಬಂದಿದ್ದ. ನಿರ್ಜೀವವಾಗಿ ಮಲಗಿದ್ದ ತಂದೆಯನ್ನೂ, ಎದೆಬಿರಿದು ಹೋಗುವಂತೆ ದುಃಖಿಸುತ್ತಿದ್ದ ತಾಯಿಯನ್ನೂ ಕಂಡಾಗ ಕುಸಿದುಬಿಟ್ಟ.
ನಂಜಯ್ಯನ ಅಂತ್ಯಕ್ರಿಯೆಗಳೆಲ್ಲವೂ ಮುಗಿದವು. ಮನೆ ಸ್ಮಶಾನ ಮೌನದಲ್ಲಿತ್ತು. ರೇವತಿ ಹಾಸಿಗೆ ಹಿಡಿದಿದ್ದರು. ಬಂದಿದ್ದ ನೆಂಟರುಗಳಲ್ಲಿ ಕೆಲವರು ಗೋಡೆಗೊರಗಿ ದುಃಖಿಸುತ್ತಿದ್ದ ರವಿಯನ್ನು ಸಂತೈಸುತ್ತಾ
“ಅಳಬೇಡವೋ ಮಗಾ, ನಿನ್ನಪ್ಪಂಗೆ ನಿನ್ನ ಕಂಡ್ರೆ ತುಂಬಾ ಪ್ರೀತಿಯಿತ್ತು. ನಿನ್ನಿಂದ ಊರಲ್ಲಿ ನನಗೊಂದು ಮರ್ಯಾದೆ ಬಂತು ಅಂತಿದ್ದ. ಎದೆಯುಬ್ಬಿಸಿಕೊoಡು ನಿನ್ನ ಬಗ್ಗೆ ನಮ್ಮ ತಾವೆಲ್ಲ ಹೇಳಿಕೊಳ್ಳುತ್ತಿದ್ದ. ಸಮಾಧಾನ ತಂದ್ಕೋ.” ಇದೆಲ್ಲ ಕಿವಿಗೆ ಬೀಳುತ್ತಿದ್ದಾಗ ಚಂದ್ರ, ಮಾಧವಿ ‘ಅವನಿಂದ ಅಪ್ಪನಿಗೆ ಮರ್ಯಾದೆ ಬಂತoತೆ, ಹಾಗಾದರೆ ನಾವು ಮರ್ಯಾದೆ ತೆಗೆಯುವ ಕೆಲಸ ಮಾಡಿದ್ದೆವಾ? ವಿದೇಶಕ್ಕೆ ಹಾರಿದ ಮಾತ್ರಕ್ಕೆ ಅವನಂಥಾ ಮಗ ಇನ್ನೊಬ್ಬ ಇಲ್ಲ. ನಾವಿಲ್ಲಿ ದಿನಾ
ಮುತುವರ್ಜಿ ವಹಿಸುವುದು ಲೆಕ್ಕಕ್ಕೇ ಬರುವುದಿಲ್ಲ’ ಎಂದು ಹಲುಬುತ್ತಿದ್ದರು. ಹುಟ್ತಾ ಹುಟ್ತಾ ಅಣ್ಣತಮ್ಮಂದಿರು, ಬೆಳೀತಾ
ಬೆಳೀತಾ ದಾಯಾದಿಗಳು ಎನ್ನೋ ಮಾತು ಇಲ್ಲಿ ಅಕ್ಷರಶಃ ಸತ್ಯವಾಗಿತ್ತು. ಒಂದೆರಡು ದಿನಗಳಲ್ಲೇ ಅಕ್ಕ,
ಅಣ್ಣಂದಿರ ಬಿಗುಮಾನಕ್ಕೆ ಕಾರಣ ರವಿಗೆ ವಿದಿತವಾಯಿತು. ಮನಸ್ಸಿಗೆ ತೀರಾ ಹಿಂಸೆಯಾಯಿತು. ತನ್ನಿoದ ತಪ್ಪಾದದ್ದೆಲ್ಲಿ? ಮನೆಯ ಕಷ್ಟ ತೀರಿಸಲು, ಅಮ್ಮನ ಆಸೆ ನೆರವೇರಿಸಲು ಮನಸ್ಸಿಟ್ಟು ಓದಿದ್ದೇ ತಪ್ಪಾ? ಅಣ್ಣ, ಅಕ್ಕನಿಗಿಂತ ಹೆಚ್ಚು
ಸಂಪಾದಿಸುವುದು, ಮೇಲ್ದರ್ಜೆಯ ಉದ್ಯೋಗದಲ್ಲಿರುವುದೇ ತಪ್ಪಾ? ಯಾವತ್ತೂ ಅಣ್ಣನನ್ನಾಗಲೀ, ಅಕ್ಕನನ್ನಾಗಲೀ ಕಡೆಗಣಿಸದೆ ತನ್ನವರೆಂದುಕೊoಡದ್ದು ತಪ್ಪಾ? ನನ್ನ ಜೊತೆಯಲ್ಲಿ ಉಳಿದುಹೋಗಲು ನಿರಾಕರಿಸಿದ ಹೆತ್ತವರನ್ನು ಇಲ್ಲಿ ಬಿಟ್ಟದ್ದೇ ತಪ್ಪಾ? ಯೋಚಿಸಿದಷ್ಟೂ ಮನಸ್ಸು ಹೈರಾಣಾಗುತ್ತಿತ್ತು.
ಎರಡೇ ದಿನದಲ್ಲಿ ರೇವತಿ ಗಂಡನ ಹಾದಿ ಹಿಡಿದರು. ಸಂಸ್ಕಾರಗಳನ್ನೆಲ್ಲ ಚoAದ್ರನೇ ಮಾಡಿದ. ರವಿಗೆ ‘ಅಪ್ಪ ಅಮ್ಮ ಇದ್ದಾಗ ಅವರ ಜೊತೆಗಿದ್ದು ನೋಡಿಕೊಂಡದ್ದು ಚಂದ್ರಣ್ಣ. ಜವಾಬ್ದಾರಿ ಅವನ ತಲೆಗೆ ಕಟ್ಟಿ ವಿದೇಶದಲ್ಲಿ ವಿಲಾಸಿ ಬದುಕು ನಡೆಸಿಕೊಂಡಿದ್ದು, ಈಗ ಊರವರ ಮುಂದೆ ದೊಡ್ಡಸ್ತಿಕೆ ಮೆರೆಯಲು ಕಾರ್ಯ ಮಾಡ್ತೀನಿ ಅಂತಿದ್ದೀಯಾ? ನಿನಗೆ ಆ ಹಕ್ಕಿಲ್ಲ’ ಎಂದು ಮಾಧವಿ ಮುಲಾಜಿಲ್ಲದೆ ಹಂಗಿಸಿದ್ದಳು. ನೊಂದು ಯಾವ ಕಾರ್ಯಕ್ಕೂ ಮುಂದೆ ಹೋಗದೆ ಉಳಿದುಬಿಟ್ಟ. ಮನೆಗೆ ಬಂದ ಮೇಲೆ ‘ಸಾಹೇಬ್ರು ಫಾರೀನಿನಿಂದ ಬಂದಿಳಿದವರಲ್ವಾ? ಹೆತ್ತವರ ಅಂತ್ಯಸoಸ್ಕಾರ
ಮಾಡ್ಲಿಕ್ಕೆ ಸ್ಟೇಟಸ್ ಅಡ್ಡಿಯಾಯಿತೇನೋ’ ಎಂದು ಚಂದ್ರ ಹಂಗಿಸಿದ್ದ. ಮುoದೆ ಹೋದರೆ ಅಕ್ಕ ತಿವಿಯುತ್ತಾಳೆ, ಹೋಗದಿದ್ದರೆ ಅಣ್ಣ ಚುಚ್ಚಿ ನುಡಿಯುತ್ತಾನೆ. ರವಿಯ ಮನ ಒಡ ಹುಟ್ಟಿದವರ ವರ್ತನೆಗೆ ರೋಸಿ ಹೋಯಿತು.
ಒಟ್ಟಿಗೆ ಆಡಿ ಕುಣಿದು, ಒಂದೇ ತಟ್ಟೆಯಲ್ಲಿ ತಿಂದುoಡು ಬೆಳೆದ ಒಡಹುಟ್ಟಿದವರು ಇಂದು ತನ್ನನ್ನು ಪರಕೀಯನನ್ನಾಗಿ ಕಾಣುತ್ತಿದ್ದಾರೆ. ಮಾತುಗಳಲ್ಲಿ ಕಹಿಯಿದೆ, ನಡವಳಿಕೆಯಲ್ಲಿ ಬಿಗುಮಾನ, ಆತ್ಮೀಯತೆಯಲ್ಲಿ
ಕೃತಕಭಾವ! ಅಕ್ಕ, ಅಣ್ಣನನ್ನು ಮಾತಿಗೆಳೆದಷ್ಟೂ ಸಂಭಾಷಣೆಯ ನಡುವೆ ಉತ್ಪ್ರೇಕ್ಷೆ, ಬಿರುನುಡಿಗಳು ಅರಸಿ ಬರುತ್ತಿದ್ದವು.
ಎಷ್ಟು ಚಂದದ ಬಂಧವಿತ್ತು ನಮ್ಮಲ್ಲಿ, ಈ ಮಟ್ಟಿಗಿನ ಹಗೆ ಅದೆಲ್ಲಿಂದ ಹಬ್ಬಿ ಬಿಟ್ಟಿತು??
ಈ ಸಮಸ್ಯೆಗೆ ಪರಿಹಾರವಾದರೂ ಏನು? ಸದ್ಯ ಕೆಲಸ ಬಿಟ್ಟು ಬರಲಾಗದು, ಕೆಲದಿನಗಳ ನಂತರ ಭಾರತಕ್ಕೆ
ವಾಪಸ್ಸಾಗಬಹುದು. ಸಿಗುವುದಕ್ಕಿಂತ ಕಡಿಮೆ ಸಂಬಳ ಎಂದು ಸುಳ್ಳು ಹೇಳಲೇ? ಇಲ್ಲದ ತಾಪತ್ರಯಗಳನ್ನು ಸೃಷ್ಟಿಸಿ ಬಣ್ಣ ಕಟ್ಟಿ ನನಗೂ ಸಮಸ್ಯೆಗಳಿವೆ ಎನ್ನಲೆ? ಹಾಗೇನೇ ಮಾಡಿದರೂ ಈ ಅಸೂಯೆ ಕಡಿಮೆಯಾದೀತೆ? ಇಲ್ಲವೇನೋ ಎನಿಸಿತು. ಅಣ್ಣನಿಗೂ ಅಕ್ಕನಿಗೂ ಅವರವರ ಸಂಸಾರದ್ದೇ ನೂರು ತಲೆ ನೋವುಗಳಿದ್ದವು. ಹೆಚ್ಚುಕಮ್ಮಿ ಎಲ್ಲರ ಬದುಕು ಅದಾಗಲೇ ಬಿಡಿಯಾಗಿದ್ದವು. ಬಹಳ ತಡವಾಗಿ ತನಗದು ಅರ್ಥವಾಗುತ್ತಿದೆ. ಅಪ್ಪ, ಅಮ್ಮನ ಅಸ್ತಿತ್ವ ಮೂವರನ್ನೂ ಈವರೆಗೂ
ಹಿಡಿದಿಟ್ಟಿತ್ತೇನೋ, ಆದರೆ ಇನ್ನು ಮುಂದೆ? ಕಾಲ ಸರಿದಂತೆ ಎಲ್ಲ ಬದಲಾಗುತ್ತದೆ. ತುಂಬಾ ಪ್ರೀತಿಸುವವರು ಬಿಟ್ಟುಹೋಗುತ್ತಾರೆ. ತೀರಾ ಆತ್ಮೀಯರಾದವರು ಅಂತರ ಕಾಯ್ದು ಕೊಳ್ಳುತ್ತಾರೆ. ನಮ್ಮವರೇ ನಮ್ಮ ಶ್ರೇಯಸ್ಸನ್ನು ಅರಗಿಸಿಕೊಳ್ಳದವರಾಗುತ್ತಾರೆ. ಬೆಸೆದು ಹೋಗಿದ್ದ ಬದುಕುಗಳು ಗಂಟು ಬಿಚ್ಚಿಕೊಂಡು ಬೇರೆ ಬೇರೆಯಾಗುತ್ತವೆ…. ಇದು ಕಾಲದ ಕ್ರೌರ್ಯವಾ ಅಥವಾ ಪ್ರಕೃತಿ ನಿಯಮದ ಇನ್ನೊಂದು ಆಯಾಮವಾ? ಆದರೂ ಈ ಬದಲಾವಣೆಗಳಲ್ಲಿ
ತುಂಬಾ ನೋವಿದೆ.
ರವಿ ಊರಲ್ಲಿ ಇದ್ದಷ್ಟೂ ದಿನ ಅಣ್ಣ, ಅಕ್ಕನನ್ನು ಆತ್ಮೀಯವಾಗಿ ಕಂಡ. ಅವನಿಗೆ ತಿಳಿದಿತ್ತು, ಮುಂದಿನ ಬಾರಿ ತಾನು ಹಿಂದಿರುಗುವಾಗ ಬಾಂಧವ್ಯ ಇನ್ನೂ ಸಡಿಲವಾಗಿ ಹೋಗಿರುತ್ತದೆಂದು. ವಿಚಿತ್ರವೆಂಬoತೆ
ಸoಬoಧಗಳಿಗೂ ವ್ಯಾಲಿಡಿಟಿ ಇರುವ ಕಾಲಕ್ಕೆ ನಾವು ಕಾಲಿಟ್ಟಾಗಿದೆ. ಇದೆಂಥಾ ದುರಂತ!! ಹೊರಡುವ ದಿನ ಅಣ್ಣನನ್ನು ಗಟ್ಟಿಯಾಗಿ ಅಪ್ಪಿ ಕಣ್ಣೊದ್ದೆ ಮಾಡಿಕೊಂಡಿದ್ದ ರವಿ. ಚಂದ್ರನ ಕರುಳೂ ಒಂದು ಕ್ಷಣಕ್ಕೆ ಚುರುಕ್ ಎಂದು ಮತ್ತೆ ತಟಸ್ಥವಾಗಿಬಿಟ್ಟಿತು. ಮನೆಯಿಂದ ಬಸ್ ಸ್ಟ್ಯಾಂಡಿನ ಕಡೆ ಹೊರಟಾಗ ಮನ ಹೊಯ್ದಾಡಿತು. ಪ್ರತೀ ಬಾರಿ ಹೀಗೆ ಹೊರಟಾಗಲೂ ಅಪ್ಪ ಖುದ್ದಾಗಿ ಬಂದು ಬಸ್ಸು ಹತ್ತಿಸುತ್ತಿದ್ದರು. ಕಣ್ಣಳತೆಗೆ ನಿಲುಕದಷ್ಟು ದೂರ ಸರಿದ ಮೇಲೆಯೂ ಅಮ್ಮ ಬಾಗಿಲಲ್ಲಿ ನಿಂತು ಕೈಬೀಸುತ್ತಲೇ ಇರುತ್ತಿದ್ದಳು. ಇಂದು ಒಬ್ಬನೇ ಹೊರಟಿದ್ದಾನೆ. ಇದು ಬದಲಾವಣೆಗಳ ಆರಂಭ.
ನಾಲ್ಕು ಮಾರು ಒಬ್ಬಂಟಿಯಾಗಿ ಹೆಜ್ಜೆಹಾಕುವಷ್ಟರಲ್ಲಿ ದುಃಖ ಒತ್ತರಿಸಿಕೊಂಡು ಬಂದಿತ್ತು. ಹಿಂತಿರುಗಿ ಹುಟ್ಟಿ ಬೆಳೆದ ಮನೆಯನ್ನೊಮ್ಮೆ ದಿಟ್ಟಿಸಿದ. ಮನಸ್ಸು ಭಾರವಾಗಿತ್ತು. ದೂರದಲ್ಲಿ ಬಸ್ಸಿನ ಹಾರನ್ನಿನ ಸದ್ದು ಕೇಳಿದಾಗ ಯೋಚನೆಯ ಕೊಂಡಿ ಕಡಿದುಬಿತ್ತು. ಬಸ್ ನಿಲ್ದಾಣದತ್ತ ಬಿರಬಿರನೆ ಹೆಜ್ಜೆ ಹಾಕತೊಡಗಿದ.